newsics.com/ನ್ಯೂಸಿಕ್ಸ್
ಕನ್ನಡ ಕಿರುತೆರೆಯ ಜನಪ್ರಿಯ ನಟ ದಿಲೀಪ್ ರಾಜ್ ಹಠಾತ್ ಸಾವನ್ನಪ್ಪಿದರು. ಹೃದಯಾಘಾತದಿಂದ ದಿಲೀಪ್ ರಾಜ್ ವಿಧಿವಶರಾದರು. ಪತಿಯನ್ನ ಕಳೆದುಕೊಂಡ ಶ್ರೀವಿದ್ಯಾ ದುಃಖದ ಮಡುವಿನಲ್ಲಿದ್ದಾರೆ. ತಮ್ಮ ನೋವನ್ನ, ಮನಸ್ಸಿನಲ್ಲಿ ಮಡುಗಟ್ಟಿರುವ ದುಃಖವನ್ನ ಸೋಷಿಯಲ್ ಮೀಡಿಯಾ ಮೂಲಕ ಶ್ರೀವಿದ್ಯಾ ಹೊರಹಾಕುತ್ತಿದ್ದಾರೆ.
ತಮ್ಮ ಇಂದಿನ ಪರಿಸ್ಥಿತಿಗೆ ದೇವರು ಹಾಗೂ ವಿಧಿಯಾಟ ಕಾರಣ ಅಂತ ಶ್ರೀವಿದ್ಯಾ ಹಿಡಿಹಿಡಿ ಶಾಪ ಹಾಕುತ್ತಿದ್ದಾರೆ. ‘ಯಾವ ಮನೆಯಲ್ಲೂ ನೆಮ್ಮದಿ ಇರಬಾರದು, ನೆಮ್ಮದಿಯಾಗಿರೋದಕ್ಕೆ ದೇವರು ಬಿಡೋದಿಲ್ಲ’ಅಂತ ದೇವರನ್ನೇ ಶ್ರೀವಿದ್ಯಾ ಶಪಿಸಿದ್ದಾರೆ.
ಇದೀಗ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ – ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು. ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು.
https://www.instagram.com/p/DYesbX7OXkD/?igsh=aWlzaW5mcTNucXl0
US -IRAN ಯುದ್ಧದ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ! ಇರಾನ್ ಅಮೆರಿಕ ಯುದ್ಧಕ್ಕೆ ಅಂತ್ಯ ಕಾಣುತ್ತಾ?