newsics.com/ನ್ಯೂಸಿಕ್ಸ್
ಕಳೆದ ವರ್ಷ ಬೇಲ್ ಪಡೆದು ಹೊರಬಂದಿದ್ದ ನಟ ದರ್ಶನ್ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ್ರು. ಆದ್ರೆ ಮತ್ತೆ ದರ್ಶನ್ ಜೈಲು ಹಕ್ಕಿಯಾಗಿದ್ದು, ಈ ಬಾರಿ ವಿಜಯಲಕ್ಷ್ಮಿ ಒಬ್ಬಂಟಿಯಾಗಿದ್ದಾರೆ. 23ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ದರ್ಶನ್ ದಂಪತಿಗೆ ಅಭಿಮಾನಿಗಳು ಶುಭಕೋರಿದ್ದಾರೆ.
ಧರ್ಮಸ್ಥಳದಲ್ಲಿ 23 ವರ್ಷಗಳ ಹಿಂದೆ ಇದೇ ದಿನ ಮದುವೆಯಾಗಿದ್ದರು ದರ್ಶನ್ ಹಾಗೂ ವಿಜಯಲಕ್ಷ್ಮಿ. ಈ ವರ್ಷ ಮದುವೆ ವಾರ್ಷಿಕೋತ್ಸವ ಜೊತೆಯಾಗಿ ಆಚರಿಸೋಕೆ ಸಾಧ್ಯವಾಗುದಿಲ್ಲ.
ಆದರೆ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಸ್ಪೆಷಲ್ ಸ್ಟೋರಿ ಹಾಕಿಕೊಂಡಿದ್ದಾರೆ. ಗಂಡನ ಕೈ ಹಿಡಿದಿರುವ ಒಂದು ಫೋಟೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿ ಎಂದೆಂದೂ ಜೊತೆಗೆ ನಿಲ್ಲುವ ಭರವಸೆಯನ್ನು ಕೊಟ್ಟಿದ್ದಾರೆ.
ಪ್ರತಿ ಬಿರುಗಾಳಿ, ಪ್ರತಿ ಮೌನದಲ್ಲಿಯೂ ನಾನು ನಿನ್ನ ಕೈಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನಿಸಿದರೂ ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸುತ್ತದೆ. ನಿನಗೆ ವಿರುದ್ಧವಾಗಿ ಜಗತ್ತೇ ನಿಂತರೂ ನಾನು ನಿನ್ನ ಜೊತೆಗೇ ಇರುತ್ತೇನೆ. ಏನೇ ಬರಲಿ ನಿನ್ನ ಕೈಬಿಡಲ್ಲ ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.