newsics.com/ನ್ಯೂಸಿಕ್ಸ್
ಮಹಾರಾಷ್ಟ್ರ: ಮಹಿಳೆಯೊಬ್ಬಳು ತನ್ನ ಗಂಡನ ಜೊತೆ ಸೇರಿ ಪ್ರಿಯಕರಯನ್ನು ಬರ್ಬರವಾಗಿ ಕೊಲೆ ಮಾಡಿ ಬಳಿಕ ಸಿಮೆಂಟ್ ತುಂಬಿದ್ದ ನೀಲಿ ಬಣ್ಣದ ಡ್ರಮ್ಗೆ ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಘಟನೆ ಮೀರತ್ನಲ್ಲಿ ನಡೆದಿದೆ.
https://youtube.com/shorts/qM17NYCF6QQ?si=P9kdXfY-X5l0cveO
ಮಹಾರಾಷ್ಟ್ರದ ಮುಂಬ್ರಾದಲ್ಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ, ನೀಲಿ ಡ್ರಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ, ಈ ಘಟನೆ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಮಹಾರಾಷ್ಟ್ರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಪೊಲೀಸರ ಪ್ರಕಾರ, ಅರ್ಬಾಜ್ ಖಾನ್ 2021 ರಿಂದ ಮಹಾರಾಷ್ಟ್ರದ ವಸೈ ನಿವಾಸಿ ಮೆಹಜಬೀನ್ ಖಾತುನ್ ಎಕ್ರಾನ್ ಶೇಖ್ ಎಂಬಾಕೆಯ ಜೊತೆ ಸಂಬಂಧ ಹೊಂದಿದ್ದನು ಎಂದು ಹೇಳಿದ್ದಾರೆ. ಅರ್ಬಾಜ್ ಮತ್ತು ಮೆಹಜಬೀನ್ ಇಬ್ಬರೂ ಆಗಾಗ್ಗೆ ಫೋನ್, ಮೆಸೇಜ್ ಮಾಡುತ್ತಿದ್ದರು. ಆದ್ರೆ, ದಿನೇ ದಿನೇ ಇಬ್ಬರ ಮಧ್ಯೆ ಮಾತುಕತೆ ಹೆಚ್ಚಾಗುತ್ತಿದ್ದಂತೆ, ಒಂದು ದಿನ ಆರೋಪಿ ಮೆಹಜಬೀನ್ ಅರ್ಬಾಜ್ ಬಳಿ ಹಣ ಕೇಳಲು ಪ್ರಾರಂಭಿಸಿದ್ದಾಳೆ. ಹೀಗೆ ಅರ್ಬಾಜ್ ತನ್ನ ಪ್ರೇಯಸಿ ಅಕೌಂಟ್ಗೆ ಪ್ರತಿ ತಿಂಗಳು ಹಣ ಟ್ರಾನ್ಸ್ಫರ್ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅರ್ಬಾಜ್ ಖಾನ್ ಹಣ ಕಳುಹಿಸುವುದನ್ನು ನಿಲ್ಲಿಸಿದ ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿದ್ದು, ಅರ್ಬಾಜ್ ಕೊಟ್ಟ ಹಣವನ್ನು ವಾಪಸ್ ಕೇಳಿದ್ದಾನೆ. ಹಣ ವಸೂಲಿ ಮಾಡಲು ಅರ್ಬಾಕಲ್ ಕಳೆದ ಏಪ್ರಿಲ್ 3 ರಂದು ಮೆಹಜಬೀನ್ ಮನೆಗೆ ತೆರಳಿದ್ದಾನೆ. ಈ ವೇಳೆ ಮೆಹಜಬೀನ್, ತನ್ನ ಪತಿ ಹಸನ್ ಶೇಖ್, ಆಕೆಯ ಸಹೋದರ ತಾರಿಕ್ ಶೇಖ್ ಮತ್ತು ಮೊಜ್ಜಮ್ ಪಠಾಣ್ ಜೊತೆ ಸೇರಿ ಆತನನ್ನು ಕೊಲೆ ಮಾಡಿ ಬಳಿಕ ನೀಲಿ ಡ್ರಮ್ ಶವವನ್ನು ತುಂಬಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಮೃತ ಅರ್ಬಾಜ್ ಖಾನ್ ಅವರ ತಂದೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತನ ಮೊಬೈಲ್ ಟವರ್ ಮತ್ತು ಕಾಲ್ ಲಿಸ್ಟ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. ಅರ್ಬಾಜ್ ಖಾನ್ ಕೊಲೆ ಆಗುವ ಒಂದು ದಿನ ಮೊದಲು ಮೆಹಜಬೀನ್ಗೆ 50 ಸಾವಿರ ಹಣವನ್ನು ನೀಡಿದ್ದನು. ಈ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ಮೆಹಜಬೀನ್ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಕೊಲೆ ಪ್ರಕರಣ ಸಂಬಂಧ ಆರೋಪಿ ಮೆಹಜಬೀನ್ ಮತ್ತು ಆಕೆಯ ಸಹೋದರ ತಾರಿಕ್ನನ್ನು ಕಳೆದ ಮೇ 7 ರಂದು ಬಂಧಿಸಲಾಗಿತ್ತು. ನಾಪತ್ತೆಯಾಗಿರುವ ಇನ್ನಿಬ್ಬರು ಆರೋಪಿಗಳಾದ ಹಸನ್ ಶೇಖ್ ಮತ್ತು ಮೊಜ್ಜಮ್ ಪಠಾಣ್ ಪೊಲೀಸರು ಬಲೆ ಬೀಸಿದ್ದಾರೆ.
https://www.newsics.com/2026/05/17/union-minister-bandi-sanjays-son-arrested-in-pocso-case/