newsics.com/ನ್ಯೂಸಿಕ್ಸ್
ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಅರೆಬರೆ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೋನಿಕಾ ನಾಗರ್ (22) ಎಂದು ಗುರುತಿಸಲಾಗಿದೆ.
https://youtube.com/shorts/vd_Fn8drod4?si=CvPPZAJu5QmGONhu
ನ್ಯಾಯಾಲಯದಲ್ಲಿ ವಿವಾಹವಾದ ಕೇವಲ ಮೂರೇ ತಿಂಗಳಲ್ಲಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಡಲು ಯತ್ನಿಸಿರುವ ಘಟನೆ ದಾದ್ರಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಅನುಜ್ ಚೌಹಾಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಮೋನಿಕಾ ನಾಗರ್ (22) ಎಂದು ಗುರುತಿಸಲಾಗಿದೆ.ಆರೋಪಿ ಅನುಜ್ ಚೌಹಾಣ್ (25) ಈ ಕೃತ್ಯ ಎಸಗಿದ್ದಾನೆ.ಈ ಜೋಡಿ ಕಳೆದ ಫೆಬ್ರವರಿ ತಿಂಗಳಷ್ಟೇ ಪ್ರೇಮ ವಿವಾಹವಾಗಿತ್ತು.
ಮೇ 7 ರಂದು ದಾದ್ರಿಯ ನಿರ್ಜನ ಪ್ರದೇಶವೊಂದರಲ್ಲಿ ಮೋನಿಕಾ ಅವರ ಅರೆಬರೆ ಸುಟ್ಟ ಸ್ಥಿತಿಯ ಶವ ಪತ್ತೆಯಾಗಿತ್ತು. ಪೊಲೀಸ್ ತನಿಖೆಯ ಪ್ರಕಾರ, ಅನುಜ್ ತನ್ನ ಪೋಷಕರು ಮತ್ತು ನೆರೆಹೊರೆಯವರ ಸಹಾಯದೊಂದಿಗೆ ಎಸ್ಯುವಿ (SUV) ಕಾರಿನಲ್ಲಿ ಶವವನ್ನು ಸಾಗಿಸಿ, ಸೆಗಣಿ ಬೆರಣಿಗಳ ಅಡಿಯಲ್ಲಿಟ್ಟು ಬೆಂಕಿ ಹಚ್ಚಿದ್ದ ಎನ್ನಲಾಗಿದೆ.
ಮೋನಿಕಾ ಅವರ ಕುಟುಂಬಸ್ಥರು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ:ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಮೋನಿಕಾಗೆ ಆಕೆಯ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು.ಕೊಲೆಯಾದ ದಿನ ಮೋನಿಕಾ ತನ್ನ ತಾಯಿಗೆ ಕರೆ ಮಾಡಿ, ತನ್ನ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಗೋಳಾಡಿದ್ದರು.ಅದೇ ಸಂಜೆ ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ಶವವನ್ನು ಸಾಗಿಸುವುದನ್ನು ಸಂಬಂಧಿಕರು ಗಮನಿಸಿದ್ದರು.
ಪೊಲೀಸರು ಆರೋಪಿ ಅನುಜ್ನನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಹಂತಕ ಅನುಜ್ ಸೇರಿದಂತೆ ಅವನ ಕುಟುಂಬದ ಏಳು ಜನರ ಮೇಲೆ ಕೊಲೆ (BNS ಸೆಕ್ಷನ್ 103) ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.