newsics.com/ನ್ಯೂಸಿಕ್ಸ್
ನಟ, ನಿರ್ಮಾಪಕ ದಿಲೀಪ್ ರಾಜ್ ಮೇ 13ರಂದು ಹೃದಯಾಘಾತದಿಂದ ನಿಧನರಾಗಿದ್ದು ಅಭಿಮಾನಿಗಳಿಗೆ ಆಘಾತ ತಂದಿದೆ. ನಟಿ ಅಭಿನಯ ಅವರು ದಿಲೀಪ್ ರಾಜ್ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ನೀಡಿದ್ದು, ಅವರಿಗೆ ಬೆಳಗಿನ ಜಾವ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳುವ ಯೋಚನೆ ಇತ್ತು. ನೋವು ಎಂದು ಹೇಳುತ್ತಿದ್ದ ದಿಲೀಪ್ ರಾಜ್ ವೈದ್ಯರ ಅಪಾಯಿಂಟ್ಮೆಂಟ್ ಪಡೆದಿದ್ದರೂ ಆಸ್ಪತ್ರೆಗೆ ಹೋಗುವ ಮುನ್ನವೇ ಇಹಲೋಕ ತ್ಯಜಿಸಿದರು.
https://youtube.com/shorts/KY0wlwc-Du0?si=-28u12qk1-aiTIHP
ಅಷ್ಟಕ್ಕೂ ಮೇ 12ರಂದು ನಟ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತಂತೆ. ಆಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದರು. ಅಂದರೆ, ತಮ್ಮ ಬಳಿ ಇದ್ದ ಸ್ಮಾರ್ಟ್ ವಾಚ್ ಮೂಲಕ ಹೃದಯ ಹಾರ್ಟ್ ಬೀಟ್ ನನ್ನು ಚೆಕ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಅದರಲ್ಲಿ ಹೃದಯದ ಬಡಿತ ಎಲ್ಲಾ ಸರಿಯಾಗಿಯೇ ತೋರಿಸಿತ್ತು. ಆದ್ದರಿಂದ ನಟ, ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ ಎನ್ನಲಾಗುತ್ತಿದೆ.
ಸ್ಮಾರ್ಟ್ವಾಚ್ ನಂಬಿದ್ದ ಅವರು ಎದೆ ನೋವು ಇದ್ದರೂ ಏನೂ ಆಗಿಲ್ಲ ಎಂದು ಮಲಗಿದ್ದಾರೆ. ಆದರೆ ಮಧ್ಯರಾತ್ರಿ ನೋವು ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಬದುಕಿ ಉಳಿಯಲೇ ಇಲ್ಲ. ಸ್ಮಾರ್ಟ್ವಾಚ್ನಂಥ ಮಷಿನ್ ನಂಬಿ ತಮ್ಮ ಜೀವವನ್ನೇ ಕಳೆದುಕೊಂಡು ಬಿಟ್ರಾ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಪ್ರಶ್ನಿಸುತ್ತಿದ್ದಾರೆ
ಮನೆಯಲ್ಲಿಯೇ ನಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಕೆಲವೊಂದು ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಬಿಪಿ,ಶುಗರ್, ಎದೆ ಬಡಿತ… ಹೀಗೆ ಎಲ್ಲದನ್ನೂ ನೋಡಿಕೊಳ್ಳಬಹುದು. ಆದರೆ ಅದು ಎಷ್ಟರಮಟ್ಟಿಗೆ ಕೆಲಸ ನಿರ್ವಹಿಸುತ್ತದೆ, ಪದೇ ಪದೇ ಅದನ್ನೇ ನಂಬಿ ಜನರು ಬದುಕುವುದು ಎಷ್ಟು ಅಪ್ರಸ್ತುತ ಎನ್ನುವ ಬಗ್ಗೆ ದಿಲೀಪ್ ರಾಜ್ ಅವರ ಪ್ರಕರಣ ಚರ್ಚೆಯನ್ನು ಹುಟ್ಟುಹಾಕಿದೆ.