newsics.com/ನ್ಯೂಸಿಕ್ಸ್
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ವೇಳೆ ದಳಪತಿ ವಿಜಯ್ ನೇತೃತ್ವದ ಟಿವಿ ಕೆ (TVK) ಸರ್ಕಾರವನ್ನು ಬೆಂಬಲಿಸಿದ ಎಲ್ಲಾ 25 ಶಾಸಕರನ್ನು ಅವರ ಪಕ್ಷದ ಹುದ್ದೆಗಳಿಂದ ತಕ್ಷಣವೇ ತೆಗೆದುಹಾಕಲಾಗಿದೆ.
ವಜಾಗೊಂಡವರಲ್ಲಿ ಎಸ್ಪಿ ವೇಲುಮಣಿ, ಸಿ.ವಿ. ಷಣ್ಮುಗಂ, ಸಿ. ವಿಜಯಭಾಸ್ಕರ್ ಮತ್ತು ನಾಥಮ್ ಆರ್. ವಿಶ್ವನಾಥನ್ ಅವರಂತಹ ಪ್ರಭಾವಿ ನಾಯಕರು ಸೇರಿದ್ದಾರೆ. ಇವರ ಬದಲಿಗೆ ಇಪಿಎಸ್ ಈಗಾಗಲೇ ಹೊಸ ಜಿಲ್ಲಾ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ವಿಶ್ವಾಸಮತ ಯಾಚನೆಯಲ್ಲಿ 144:22 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ಎಐಎಡಿಎಂಕೆಯ ಒಟ್ಟು ಶಾಸಕರಲ್ಲಿ ಕೇವಲ 22 ಮಂದಿ ಮಾತ್ರ ಪಕ್ಷದ ನಿಲುವಿಗೆ ಬದ್ಧರಾಗಿ ವಿಜಯ್ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಆದರೆ, ಸಿ.ವಿ. ಷಣ್ಮುಗಂ ಮತ್ತು ವೇಲುಮಣಿ ಬಣದ 25 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರವಾಗಿ ನಿಂತಿದ್ದಾರೆ.