newsics.com/ನ್ಯೂಸಿಕ್ಸ್
ಬೆಂಗಳೂರು: ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ನಗರದ ಹೌಸಿಂಗ್ ಬೋರ್ಡ್ ಬಳಿಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.
ಕಾಡಾನೆ ಓಡಾಟ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಾಪೌಂಡ್ಗಳನ್ನು ಹಾರಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಕಾಡಾನೆ ಹಲವೆಡೆ ವಾಹನಗಳನ್ನ ಹಾನಿ ಮಾಡಿದೆ.
ನಗರ ಪ್ರದೇಶಕ್ಕೆ ಆನೆ ಎಂಟ್ರಿ ಹಿನ್ನೆಲೆ ಅರಣ್ಯ ಇಲಾಖೆಯಿಂದ ಅಲರ್ಟ್ ಘೋಷಿಸಲಾಗಿದ್ದು, ಯಾರು ಕೂಡ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ.
ಬಳ್ಳಾರಿ ಮೂಲದ ರಾಮಪ್ಪ ಎಂಬುವವರ ಗುಡಿಸಲನ್ನು ಒಂಟಿ ಸಲಗ ಧ್ವಂಸಗೊಳಿಸಿದ್ದು, ಗುಡಿಸಲಿನಲ್ಲಿದ್ದ ರಾಮಪ್ಪಗೆ ಗಾಯಗಳಾಗಿವೆಯಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಡಾನೆ ಕಂಡು ಆಘಾತದಿಂದ ಮನೆ ಮುಂದೆ ಗೀತಾ ಎಂಬುವರು ಕುಸಿದುಬಿದ್ದಿದ್ದು, ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.
NIA Court judgement ಕುಕ್ಕರ್ ಬಾಂಬ್ ಸ್ಫೋಟ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ: ಎನ್ಐಎ ಕೋರ್ಟ್ ತೀರ್ಪು
ಗೋಲ್ಗಪ್ಪಾ ತಿಂದು 7 ವರ್ಷದ ಬಾಲಕ ಸಾವು; 18 ಮಂದಿ ಆಸ್ಪತ್ರೆಗೆ ದಾಖಲು