newsics.com/ನ್ಯೂಸಿಕ್ಸ್
ಬೆಂಗಳೂರು: ಪ್ರೇಯಸಿಯೊಬ್ಬಳು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಬಾ ಎಂದು ತನ್ನ ಪ್ರಿಯಕರನನ್ನ ಮನೆಗೆ ಕರೆಯಿಸಿಕೊಂಡಿದ್ದು, ಬಳಿಕ ಪ್ರಿಯಕರನ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಬಳಿಕ ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಪ್ರೇಯಿಸಿ ಪ್ರೇಮಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
https://youtube.com/shorts/eOoYZp9a9F0?si=CP6V90gKWCTFTFCS
ಪೊಲೀಸರ ತನಿಖೆ ವೇಳೆ ಆರೋಪಿ ಪ್ರೇಮಾ ಕೊಲೆ ಹಿಂದಿನ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ವರುಷಗಳಿಂದ ಪ್ರೀತಿ ಮಾಡ್ತಿದ್ದ ಕಿರಣ್ನನ್ನು ಭೀಕರವಾಗಿ ಕೊಲೆ ಮಾಡಲು ಕಾರಣ ಏನು ಗೊತ್ತಾ?
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನಿಗೆ ಬೆಂಕಿ ಇಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮಾಳನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ರು. ಖಾಕಿ ಡ್ರಿಲ್ಗೆ ಕಂಗಾಲಾದ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಮದುವೆ ವಿಚಾರ ಬಂದಾಗ ಕಿರಣ್ ತನಗೆ ಅವಮಾನ ಮಾಡ್ತಿದ್ದ. ಜಾತಿ ನೆಪವೇಳಿ ಮದುವೆಯನ್ನೇ ನಿರಾಕರಿಸುತ್ತಿದ್ದ ಎಂದು ಆರೋಪಿ ಪ್ರೇಮಾ ಹೇಳಿಕೆ ನೀಡಿದ್ದು, ಮದುವೆ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತು ಎನ್ನುವ ಸತ್ಯ ಹೊರಬಿದ್ದಿದೆ. ಅಷ್ಟೇ ಅಲ್ಲದೇ ಕಿರಣ್ ತನ್ನನ್ನು ಭೋಗದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ತಿದ್ದ ಎಂದು ಪ್ರೇಮಾ ಹೇಳಿದ್ದಾರೆ ಎನ್ನಲಾಗ್ತಿದೆ.
ಪ್ರೇಮಾ ದುಬಾರಿ ಗಿಫ್ಟ್ ಕೊಡ್ತಾಳೆ ಅಂತಾನೆ ಕಿರಣ್ ಆಕೆಯ ಮನೆಗೆ ಬಂದಿದ್ದ. ಬೈಕ್ ಗಿಫ್ಟ್ ಕೊಡ್ತೀನಿ ಅಂತ ಕಿರಣ್ನನ್ನ ಕರೆದಿದ್ದ ಪ್ರೇಮಾ ಬಳಿಕ ಇದೇ ಕಾರಣಗಳಿಗೆ ನಾನು ಕಿರಣ್ ಕೊಲೆಗೆ ಪ್ಲಾನ್ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿ ಪ್ರೇಮಾ ತಪ್ಪೊಪ್ಪಿಕೊಂಡಿದ್ದಾಳೆ.
ಕಿರಣ್ಗೆ ಬೆಂಕಿ ಇಟ್ಟ ಬಳಿ ಕೊಲೆಗಾತಿ ಪ್ರೇಮಾ, ತಾನು ಕೂಡ ವಿಷ ಕುಡಿದು ಸಾಯಲು ನಿರ್ಧರಿಸಿದ್ದಳು. ಆದ್ರೆ, ಬೆಂಕಿ ಹೊಗೆ ಹೆಚ್ಚಾದಂತೆ ಆತಂಕಗೊಂಡು ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಬಚ್ಚಿಟ್ಟುಕೊಂಡಿದ್ದಳು. ನಂತರ ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಳು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.