https://youtube.com/shorts/RcxcteKkGZ8?si=yxDv0iURLfg799X9
newsics.com
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ ಮಾಡಿದೆ. ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’ ಹಾಗೂ ‘ಸಲಾರ್’ ನಂತಹ ದೃಶ್ಯಕಾವ್ಯಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿ, ಕಥೆ ಮತ್ತು ಮೇಕಿಂಗ್ಗೆ ಹೊಸ ವ್ಯಾಖ್ಯಾನ ಬರೆದ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.
ಮಹಾವತಾರ ನರಸಿಂಹ’ ಬಿಡುಗಡೆ ಆದಾಗಲೇ ಈ ‘ಮಹಾವತಾರ’ ಸರಣಿ ಮುಂದುವರೆಯುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಅದರಂತೆ ಈಗ ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಘೋಷಿಸಲಾಗಿದೆ.
‘ಯಾವಾಗ ಧರ್ಮ ಬೀಳುತ್ತದೆಯೋ ಆಗೆಲ್ಲ ‘ಪರಶು’ ಏಳುತ್ತದೆ’ ಎಂಬ ಕ್ಯಾಚಿ ಲೈನ್ ಜೊತೆಗೆ ಅನಿಮೇಟೆಡ್ ವಿಡಿಯೋ ಒಂದನ್ನು ಟೀಸರ್ ರೀತಿ ಬಿಡುಗಡೆ ಮಾಡಲಾಗಿದೆ. ಪೌರಾಣಿಕ ಕತೆಯಾದ ಪರಶುರಾಮನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾ ಮುಂದಿನ ವರ್ಷ ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ.
ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಪರಶುರಾಮ ಅವತಾರ ಕೂಡ ಒಂದು. ವಿಷ್ಣುಪುರಾಣ ಸೇರಿದಂತೆ ಸಾಕಷ್ಟು ಪೌರಾಣಿಕ ಕಾವ್ಯಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಶ್ರೀವಿಷ್ಣುವಿನ 6ನೇ ಅವತಾರ ಪರಶುರಾಮ. ಜಮದಗ್ನಿ ಹಾಗೂ ರೇಣುಕಾ ದಂಪತಿ ಮಗನಾಗಿ ತ್ರೇತಾಯುಗದಲ್ಲಿ ಜನಿಸಿದ ಪರಶುರಾಮ ಸಪ್ತ ಚಿರಂಜೀವಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕಾರ್ತವೀರ್ಯಾರ್ಜುನನು ತನ್ನ ತಂದೆ ಜಮದಗ್ನಿ ಅವರನ್ನು ಕೊಂದ ಸೇಡಿಗಾಗಿ ದುಷ್ಟ ಕ್ಷತ್ರಿಯರನ್ನು ಭೂಮಂಡಲದಲ್ಲಿ 21 ಬಾರಿ ಸಂಹರಿಸಿದರು ಎಂದು ಕಾವ್ಯಗಳಲ್ಲಿ ದಾಖಲಾಗಿದೆ. ಇದೇ ಕಥೆಯನ್ನು ಆನಿಮೇಷನ್ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.