https://youtube.com/shorts/AWyQA9JMFI4?si=6teca9JBs0VZQurx
newsics.com
ಉತ್ತರ ಪ್ರದೇಶ: ಅಪಹರಿಸಲ್ಪಟ್ಟ ಇಬ್ಬರು ಮಕ್ಕಳನ್ನು ಮರಳಿ ಕರೆತರುತ್ತಿದ್ದ ವೇಳೆ ಆರೋಪಿಗಳ ಬೊಲೆರೊ ಕಾರು ಭೀಕರ ಅಪಘಾತವಾಗಿ ಮೂವರು ಅಪಹರಣಕಾರರು ಹಾಗೂ ಇಬ್ಬರು ಬೈಕ್ ಸವಾರರು ಸೇರಿದಂತೆ ಒಟ್ಟು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
. ವೇಗವಾಗಿ ಬಂದ ಬೊಲೆರೊ ಕಾರು ಮೊದಲು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು, ನಂತರ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಬೊಲೆರೊ ಮತ್ತು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿವೆ.
ಬೊಲೆರೊದಲ್ಲಿದ್ದ ಸಿಕಂದರ್ ಕುಮಾರ್ (28), ಮನ್ಮೋಹನ್ (42), ಮತ್ತೊಬ್ಬ ಅಪರಿಚಿತ ವ್ಯಕ್ತಿ ಹಾಗೂ ಬೈಕ್ನಲ್ಲಿದ್ದ ಶಂಶಾದ್ (45) ಮತ್ತು ಮಮ್ತಾಜ್ (65) ಎಂದು ಗುರುತಿಸಲಾಗಿದೆ.
ಅಪಘಾತದ ನಂತರ ಗಾಯಾಳು ಚಾಲಕ ಪ್ರಿನ್ಸ್ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಸತ್ತವರು ತನ್ನ ಸಹಚರರೆಂದು ಮತ್ತು ತಾವು ಗುರುಗ್ರಾಮದಿಂದ ಆಟೋ ಚಾಲಕ ಮನೋಜ್ ಹಾಗೂ ಆತನ ಇಬ್ಬರು ಮಕ್ಕಳನ್ನು ಅಪಹರಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಮೂಲತಃ ಫರಿದ್ಪುರದವನಾದ ಮನೋಜ್ ಗುರುಗ್ರಾಮದಲ್ಲಿ ಆಟೋ ಓಡಿಸುತ್ತಿದ್ದ. ಆರೋಪಿ ಮನ್ಮೋಹನ್ ಮನೋಜ್ ಅವರ ದತ್ತು ಪುತ್ರಿಯನ್ನು ಮದುವೆಯಾಗಲು ಬಯಸಿದ್ದ. ಇದಕ್ಕೆ ಮನೋಜ್ ವಿರೋಧ ವ್ಯಕ್ತಪಡಿಸಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಮನೋಜ್ ಮತ್ತು ಆತನ ಮಕ್ಕಳನ್ನು ಅಪಹರಿಸಿದ್ದರು. ಈ ಬಗ್ಗೆ ಮನೋಜ್ ಪತ್ನಿ ಪೂಜಾ ಗುರುಗ್ರಾಮದ ಡಿಎಲ್ಎಫ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಮುಂದಿನ ತನಿಖೆಯನ್ನು ಹರಿಯಾಣ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.