newsics.com
ಬೆಳಗಾವಿಯ ಯುವ ರೈತನೊಬ್ಬನ ಅದ್ಭುತ ಸಾಧನೆಗೆ ಈಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬೆರಗಾಗಿದ್ದಾರೆ. ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಕನ್ನಡಿಗನ ಹೆಸರು ದೇಶಾದ್ಯಂತ ಮೊಳಗಿದೆ.
ಬಿ.ಎ. ಮುಗಿಸಿದ್ದ ರಾಜುಗೆ ದೇಶ ಕಾಯಲು ಆರ್ಮಿ ಸೇರಬೇಕು ಎಂಬ ದೊಡ್ಡ ಕನಸಿತ್ತು. ಆದರೆ ಅಲ್ಲಿ ಅವಕಾಶ ಸಿಗಲಿಲ್ಲ. ಬಳಿಕ ಹೈನುಗಾರಿಕೆ ಮಾಡುವ ಯೋಚನೆ ಬಂತಾದರೂ ಅದರಲ್ಲಿ ಲಾಭದ ಖಾತ್ರಿ ಇರಲಿಲ್ಲ. ಆಗ ಹೊಳೆದದ್ದೇ ಈ ಮೀನು ಕೃಷಿ! ಸುಮ್ಮನೆ ಕಣಕ್ಕಿಳಿಯದ ರಾಜು, ಬರೋಬ್ಬರಿ 1 ವರ್ಷಗಳ ಕಾಲ ತುಮಕೂರು, ಮಂಡ್ಯ, ಆಂಧ್ರಪ್ರದೇಶ ಸುತ್ತಿ ಅತ್ಯಾಧುನಿಕ ‘ಬಯೋಪ್ಲಾಕ್’ ಮೀನು ಕೃಷಿಯ ಸಂಪೂರ್ಣ ತರಬೇತಿ ಪಡೆದುಕೊಂಡರು
ಇದೀಗ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಮೀನುಗಾರಿಕೆಗೆ 30 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಆರಂಭಿಸಿರುವ ಶಿವಲಿಂಗಪ್ಪ, ಕಳೆದ ಮೂರು ವರ್ಷದಿಂದ ಮೀನು ಸಾಗಾಣಿಕೆ ಮಾಡುತ್ತಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ ನಾಲ್ಕು ಕೃಷಿ ಹೊಂಡ ನಿರ್ಮಿಸಿ 15 ಸಾವಿರ ಮೀನುಗಳನ್ನ ಸಾಗಾಣಿಕೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಮೀನು ಮರಿಗಳನ್ನ ತರುತ್ತಾರೆ. ಏಳರಿಂದ ಎಂಟು ತಿಂಗಳವರೆಗೆ ಒಂದು ಬ್ಯಾಚ್ ರೆಡಿಯಾಗುತ್ತೆ. ಮೀನು ಬೇಕಾದವರು ಇವರ ಕೃಷಿ ಹೊಂಡಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ಕೃಷಿ ಹೊಂಡದ ನೀರು ಬದಲಾವಣೆ ಮಾಡುತ್ತಾರೆ.
ರಾಜು ಅವರ ಈ ಹೊಸ ಐಡಿಯಾ ಈಗ ಬಂಪರ್ ಲಾಭ ತಂದುಕೊಟ್ಟಿದೆ. ಮೀನು ಸಾಕಾಣಿಕೆ ಶುರು ಮಾಡಿದ ಕೇವಲ 8 ತಿಂಗಳಲ್ಲಿ ಮೊದಲ ಬ್ಯಾಚ್ ಮಾರಾಟಕ್ಕೆ ಸಿದ್ಧವಾಗಿ ಬರೋಬ್ಬರಿ 25 ಲಕ್ಷ ರೂ. ಆದಾಯ ತಂದುಕೊಟ್ಟಿದೆ.ರಾಜು ಅವರ ಈ ಸ್ಫೂರ್ತಿದಾಯಕ ಯಶೋಗಾಥೆ ದೆಹಲಿಯವರೆಗೂ ತಲುಪಿದ್ದು, ಇಂದಿನ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
https://www.newsics.com/2026/03/30/actor-prakash-rajs-mother-passed-away/