https://youtube.com/shorts/7-1-Ue0Sh8o?si=IPl4cpVzjeJG3YdO
newsics.com
ಮನೆಯಲ್ಲಿ ಸೂತಕದ ಛಾಯೆ ಇದ್ದರೂ ಮನಸ್ಸಿನಲ್ಲಿ ಪತಿಯ ನೆನಪಿನ ಮಳೆಯಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ವಿದ್ಯಾರ್ಥಿಗಳಿಗೆ ಗಣಿತದ ಸೂತ್ರಗಳನ್ನು ಬಿಡಿಸಿ ಹೇಳಿಕೊಟ್ಟರು. ಶಿಕ್ಷಕಿಯ ಈ ಅದಮ್ಯ ವೃತ್ತಿಬದ್ಧತೆಯನ್ನು ಕಂಡು ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರು ಭಾವುಕರಾಗಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಜಿ.ಬಿ. ಸರಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಜ್ಯೋತಿ ಅವರ ಕರ್ತವ್ಯ ಪ್ರಜ್ಞೆಯನ್ನು ಕಂಡು ಹೆಮ್ಮೆ ಪಡುತ್ತಾಗಿದೆ. ಇದಕ್ಕೆ ಕಾರಣ ಬುಧವಾರ ನಡೆದ ಆ ದುರ್ಘಟನೆ ಜ್ಯೋತಿ ಅವರ ಪತಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಕಿರಣ್ ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು ಸಂಜೆ ವೇಳೆಗೆ ಅಂತ್ಯಸಂಸ್ಕಾರವೂ ನೆರವೇರಿತು ಪತಿಯನ್ನು ಕಳೆದುಕೊಂಡ ಜ್ಯೋತಿ ಅವರ ಬದುಕು ದಿಕ್ಕುತೋಚದಂತಾಗಿತ್ತು.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಯಾರೇ ಆದರೂ ತಿಂಗಳುಗಟ್ಟಲೇ ಮನೆಯಿಂದ ಹೊರಬರಲು ಸಾಧ್ಯವಾಗದು ಆದರೆ ಜ್ಯೋತಿ ಅವರಿಗೆ ನೆನಪಾಗಿದ್ದು ತಮ್ಮ ಶಾಲೆಯ ಎಸ್ಎಸ್ಎಲ್ಸಿ ಮಕ್ಕಳು ಮಾರ್ಚ್ 28 ರಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಎನ್ನಿಸುವ ಗಣಿತ ವಿಷಯದ ಪರೀಕ್ಷೆ ಇದೆ ತಾವು ಗಣಿತ ಶಿಕ್ಷಕಿಯಾಗಿರುವುದರಿಂದ ಈ ಅಂತಿಮ ಕ್ಷಣದಲ್ಲಿ ತಾವು ಶಾಲೆಗೆ ಹೋಗದಿದ್ದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ಭಾವಿಸಿದ ಅವರು ಪತಿ ಮೃತಪಟ್ಟ ಮರುದಿನವೇ ಅಂದರೆ ಗುರುವಾರ ಶಾಲೆಗೆ ಹಾಜರಾಗಿದ್ದಾರೆ.