newsics.com
ನಟಿ ವರಲಕ್ಷ್ಮಿ ಶರತ್ಕುಮಾರ್ (Varalaxmi Sarathkumar) ತಮ್ಮ ಚೊಚ್ಚಲ ತೆಲುಗು ನಿರ್ದೇಶನದ ಎಸ್ ಸರಸ್ವತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ . ಸಂದರ್ಶನದಲ್ಲಿ (Interview), , ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸಹನಟಿ ಪ್ರಿಯಾಮಣಿ (Priyamani) ಮತ್ತು ಲಕ್ಷ್ಮಿ ಮಂಚು ಸೇರಿದಂತೆ ಕೆಲವರು ಅವರ ಮಾತನ್ನು ಒಪ್ಪಿಕೊಂಡರೆ, ಇತರರು ನಟಿಯನ್ನು ಟೀಕಿಸಿದರು.
ಸಂದರ್ಶನದಲ್ಲಿ ಮಾತನಾಡಿದ, ವರಲಕ್ಷ್ಮಿ, “ನಾವು ಯಾರೂ ಲೈಂಗಿಕತೆಯ ಬಗ್ಗೆ ಮಾತನಾಡಲು ಇಷ್ಟಪಡದ ದೇಶದಲ್ಲಿದ್ದೇವೆ, ಜನಸಂಖ್ಯೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಜನರು ಮಕ್ಕಳನ್ನು ಫ್ಯಾಕ್ಟರಿಯಂತೆ ಪಡೆಯುತ್ತಾರೆ. ಮಕ್ಕಳಾದ ಮೇಲೆ ನಮಗೆ ತುಂಬಾ ಕಷ್ಟವಿದೆ, ಆರ್ಥಿಕ ಸಮಸ್ಯೆ ಇದೆ ಎಂದು ಅಳುತ್ತಾರೆ. ಕಷ್ಟವಿದ್ದರೆ ಮಕ್ಕಳನ್ನು ಪಡೆಯಲು ಯಾರು ಹೇಳಿದರು? ಮೊದಲು ಪ್ಲಾನ್ ಮಾಡಿ, ನಂತರ ಮಕ್ಕಳನ್ನು ಪಡೆಯಿರಿ ಎಂದು ಅವರು ಹೇಳಿದರು.
ಮಕ್ಕಳನ್ನು ಹೊಂದುವುದಕ್ಕೆ ತಾನು ವಿರೋಧಿಯಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. “ಆರ್ಥಿಕತೆ ಬದಲಾಗಿದೆ; ಮಕ್ಕಳನ್ನು ಹೊಂದುವುದು ದುಬಾರಿಯಾಗಿದೆ. ಮಕ್ಕಳನ್ನು ಹೊಂದುವುದಕ್ಕೆ ನಾನು ವಿರೋಧಿಯಲ್ಲ. ಜನರು ತಮ್ಮ ಮಕ್ಕಳ ವಿಷಯದಲ್ಲಿ ನನ್ನ ಸಹಾಯ ಕೇಳಲು ಬರುತ್ತಾರೆ. ನಾನು ಅವರಿಗೆ ಜನ್ಮ ನೀಡಿದ್ದೇನೆಯೇ? ಎಂದು ಸಾಕಷ್ಟು ಬಾರಿ ಕೇಳಿದ್ದೆ. ಆರ್ಥಿಕ ಸ್ಥಿರತೆಯನ್ನು ಹೊಂದಿ, ಮದುವೆಯಾಗಿ ಮಕ್ಕಳನ್ನು ಹೊಂದಲು ಹೇಳಿದ್ದೇನೆ” ಎಂದು ವರಲಕ್ಷ್ಮಿ ಹೇಳುತ್ತಾರೆ.
ವರಲಕ್ಷ್ಮಿ ಮಾತನಾಡುತ್ತಿದ್ದಂತೆ, ಸಂದರ್ಶನದಲ್ಲಿ ಕುಳಿತಿದ್ದ ಪ್ರಿಯಾಮಣಿ ಕೂಡ ಅವರ ಮಾತಿಗೆ ಸಮ್ಮತಿಸಿದರು. ಸಂದರ್ಶನದ ಒಂದು ಕ್ಲಿಪ್ ವೈರಲ್ ಆದ ನಂತರ, ಲಕ್ಷ್ಮಿ ಮಂಚು ಚಪ್ಪಾಳೆ ತಟ್ಟುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದರು. ಒಬ್ಬ ಅಭಿಮಾನಿ ಹೇಳುವುದು 100% ಸರಿ, ಆದರೆ ಈ ಸಮಾಜ ಅದನ್ನು ಎಂದಿಗೂ ನಂಬುವುದಿಲ್ಲ” ಎಂದು ಬರೆದಿದ್ದಾರೆ.
ಇನ್ನೊಂದು ವರ್ಗದ ನೆಟ್ಟಿಗರು ನಟಿಯ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ಪಡೆಯುವುದು ವೈಯಕ್ತಿಕ ನಿರ್ಧಾರ. ಬಡತನದಲ್ಲೂ ಮಕ್ಕಳು ಬೆಳೆಯುತ್ತಾರೆ, ಎಲ್ಲವನ್ನೂ ಹಣದ ಕನ್ನಡಕದಿಂದಲೇ ನೋಡಬಾರದು” ಎಂದು ಕಮೆಂಟ್ ಮಾಡುತ್ತಿದ್ದಾರೆ.
ವರಲಕ್ಷ್ಮಿ ಅವರು ಜುಲೈ 2024 ರಲ್ಲಿ ನಿಕೋಲಾಯ್ ಸಚ್ದೇವ್ ಅವರನ್ನು ವಿವಾಹವಾದರು ಮತ್ತು ಕೊನೆಯದಾಗಿ ಎಸ್ ಸರಸ್ವತಿ ಚಿತ್ರದಲ್ಲಿ ಕಾಣಿಸಿಕೊಂಡರು.
ರಶ್ಮಿಕಾ-ವಿಜಯ್ ಜತೆ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ – ವಿಡಿಯೋ ನೋಡಿ
ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರಿಗೆ ಉದ್ಯೋಗ ಸಿಗುವುದು ಕಷ್ಟ: ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್