Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೆರಿಕ ದಾಳಿಯಿಂದ ಖಮೇನಿ ಪುತ್ರನಿಗೆ ಗಾಯ; ಹೇಗಿದೆ ಸ್ಥಿತಿ?
ಪ್ರಮುಖವಿದೇಶ

ಅಮೆರಿಕ ದಾಳಿಯಿಂದ ಖಮೇನಿ ಪುತ್ರನಿಗೆ ಗಾಯ; ಹೇಗಿದೆ ಸ್ಥಿತಿ?

Share
2 Min Read
SHARE

newsics.com

ಮತ್ತೆ ಮತ್ತೆ ಇಸ್ರೇಲ್- ಇರಾನ್ ಮಧ್ಯದ ಯುದ್ಧ ಹೆಚ್ಚಾಗುತ್ತಲೇಇದೆ. ಎರಡು ಗುಂಪುಗಳು ಮತ್ತೆ ಮತ್ತೆ ಅಟ್ಯಾಕ್ ಮಾಡುತ್ತಿದ್ದಾರೆ.

ಇದೀಗ ಈ ದಾಳಿಯಿಂದಾಗಿ ಇರಾನ್‌ನ ಸುಪ್ರೀಮ್ ಲೀಡರ್ ಅಯತೊಲ್ಲಾ ಅಲಿ ಖಮೇನಿಯವರ ಪುತ್ರ ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕಾ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್-ಹದತ್ ಮತ್ತು ದಿ ಟೈಮ್ಸ್ ಆಫ್ ಇಸ್ರೇಲ್ ಮಾಧ್ಯಮಗಳು ಈ ಮಾಹಿತಿಯನ್ನು ವರದಿ ಮಾಡಿವೆ. 56 ವರ್ಷದ ಮೊಜ್ತಬಾ ಅವರನ್ನು ಇರಾನ್‌ನ ಮುಂದಿನ ಸುಪ್ರೀಮ್ ಲೀಡರ್ ಎಂದು ಪರಿಗಣಿಸಲಾಗುತ್ತಿದೆ. ಈ ಮಧ್ಯೆ ದಾಳಿಯಲ್ಲಿ ಅವರು ಗಾಯಗೊಂಡಿರುವುದು ತಿಳಿದುಬಂದಿದೆ.

ಖಮೇನಿ ಪುತ್ರ ಮೊಜ್ತಬಾ ಖಮೇನಿಗೆ ಗಾಯ

ಇರಾನ್‌ನ ಪ್ರಬಲ ಮಿಲಿಟರಿ ಸಂಸ್ಥೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೂಡ ಖಮೇನಿ ಪುತ್ರ ಮೊಜ್ತಬಾ ಖಮೇನಿ ಹೆಸರನ್ನು ಬೆಂಬಲಿಸುತ್ತಿದ್ದು, ಅವರನ್ನು ಆ ಹುದ್ದೆಗೆ ಬಡ್ತಿ ನೀಡುವ ಪ್ರಯತ್ನದಲ್ಲಿದೆ ಎಂದು ವರದಿಗಳು ಹೇಳುತ್ತವೆ. ಅಲಿ ಖಮೇನಿಯವರ ಸಾವಿನ ನಂತರ ಇರಾನ್‌ನಲ್ಲಿ ಉತ್ತರಾಧಿಕಾರಿ ಚರ್ಚೆ ಜೋರಾಗಿದೆ. ನ್ಯೂಯಾರ್ಕ್ ಟೈಮ್ಸ್ ಮಾಧ್ಯಮದ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಉತ್ತರಾಧಿಕಾರಿಯಾಗಿ ಮುಂಚೂಣಿಯಲ್ಲಿದ್ದರು.

ಸುಪ್ರೀಮ್ ಲೀಡರ್ ಹುದ್ದೆಗೆ ಉತ್ತರಾಧಿಕಾರಿಯಾಗಿ ಮೊಜ್ತಬಾ ಆಯ್ಕೆ!

ವಿರೋಧ ಪಕ್ಷದ ಮಾಧ್ಯಮ ಇರಾನ್ ಇಂಟರ್ನ್ಯಾಷನಲ್ ‘ಮಾಹಿತಿಯುಕ್ತ ಮೂಲಗಳನ್ನು’ ಉಲ್ಲೇಖಿಸಿ, ಮೊಜ್ತಬಾ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ. ಸುಪ್ರೀಮ್ ಲೀಡರ್ ಹುದ್ದೆಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಂದಿರುವ 88 ಸದಸ್ಯರ ತಜ್ಞರ ಸಭೆ (ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್) ಮರುದಿನವೇ ತಮ್ಮ ಆಯ್ಕೆಯನ್ನು ಪ್ರಕಟಿಸಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. ಆದರೆ ಚರ್ಚೆಗಳ ಬಗ್ಗೆ ಪರಿಚಿತವಾದ ಇರಾನಿನ ಅಧಿಕಾರಿಗಳನ್ನು ಉಲ್ಲೇಖಿಸಿ, ಮೊಜ್ತಬಾ ಅವರನ್ನು ಸುಪ್ರೀಮ್ ಲೀಡರ್ ಎಂದು ಘೋಷಿಸುವ ಬಗ್ಗೆ ಧರ್ಮಗುರುಗಳು ಕೆಲವು ಅನುಮಾನಗಳನ್ನು ಹೊಂದಿದ್ದಾರೆ. ಏಕೆಂದರೆ ಇದು ಅಮೆರಿಕಾ ಮತ್ತು ಇಸ್ರೇಲ್ ಅವರನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ವರದಿ ಹೇಳಿದೆ.

ಮೊಜ್ತಬಾ ಅವರು ತಂದೆಯ ಎರಡನೇ ಹಿರಿಯ ಪುತ್ರರಾಗಿದ್ದು, ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಅವರು ಸುಪ್ರೀಮ್ ಲೀಡರ್ ಹುದ್ದೆಗೆ ಮುಂಚೂಣಿಯಲ್ಲಿದ್ದರು. ಆದರೆ ದಾಳಿಯಲ್ಲಿ ಗಾಯಗೊಂಡಿರುವುದರಿಂದ ಉತ್ತರಾಧಿಕಾರಿ ಪ್ರಕ್ರಿಯೆಗೆ ಹೊಸ ತಿರುವು ಸಿಕ್ಕಿದೆ. ಇಸ್ರೇಲಿ ಭದ್ರತಾ ಅಧಿಕಾರಿಗಳು ಮೊಜ್ತಬಾ ಇನ್ನೂ ಜೀವಂತರಿದ್ದಾರೆ ಎನ್ನುತ್ತಿದ್ದರೂ ಗಾಯಗೊಂಡಿದ್ದಾರೆ ಎಂದು ಅಂದಾಜಿಸಿದ್ದಾರೆ.

ಇರಾನ್‌ನ ಹೊಸ ಭಯೋತ್ಪಾದಕ ಮುಖ್ಯಸ್ಥ ಗುರಿ

ಇಸ್ರೇಲ್ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಅವರು ಈ ವಿಚಾರದ ಬಗ್ಗೆ ಮಾತನಾಡಿ, ‘ತಜ್ಞರ ಸಭೆಯ ಕೋಮ್ ಕಟ್ಟಡವನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ. ಇರಾನ್‌ನ ಹೊಸ ‘ಭಯೋತ್ಪಾದಕ ಮುಖ್ಯಸ್ಥ’ನ್ನು ನೇಮಿಸುವ ಪ್ರಯತ್ನಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

ಈ ದಾಳಿಗಳು ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿವೆ. ಸುಪ್ರೀಮ್ ಲೀಡರ್ ಹುದ್ದೆಗೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಯನ್ನು ತಡೆಯುವುದು ಇಸ್ರೇಲ್ ಮತ್ತು ಅಮೆರಿಕಾದ ಗುರಿಯಾಗಿದೆ. ತಜ್ಞರ ಸಭೆಯು ಹೊಸ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಂದಿದ್ದು, ಈ ದಾಳಿಗಳು ಅದನ್ನು ಅಡ್ಡಿಪಡಿಸಿವೆ. ಯುದ್ಧದ ಪರಿಣಾಮಗಳು ತೀವ್ರವಾಗಿವೆ. ಇರಾನ್‌ನಲ್ಲಿ ಸಾವುನೋವುಗಳು ಹೆಚ್ಚುತ್ತಿವೆ, ಮತ್ತು ದಾಳಿಗಳು ಮುಂದುವರೆಯುತ್ತಿವೆ.

ಹಾಸ್ಟೆಲ್ನ ವಾರ್ಡನ್ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್: ಓರ್ವ ಬಾಲಕ ಸಾವು

TAGGED:Iran attacks Israel's Haifa oil refinery
Share This Article
Facebook Twitter Copy Link Print
Previous Article ಇಸ್ರೇಲ್‌ನ ‘ಹೈಫಾ’ ತೈಲ ಸಂಸ್ಕರಣಾ ಕೇಂದ್ರದ ಮೇಲೆ ಇರಾನ್ ದಾಳಿ
Next Article ಈಗ ಅಮೆರಿಕದ ಗುರಿ ಯಾವ ದೇಶ?; ಟ್ರಂಪ್ ಹೇಳಿದ್ದೇನು?

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?