Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಈ ಎಲ್ಲಾ ವಸ್ತುಗಳ ಬೆಲೆಯಲ್ಲೂ ಭಾರೀ ಹೆಚ್ಚಳ: ಯುದ್ಧ ಮುಂದುವರೆದರೆ ಏನಾಗುತ್ತೆ?
ಪ್ರಮುಖವಿದೇಶ

ಈ ಎಲ್ಲಾ ವಸ್ತುಗಳ ಬೆಲೆಯಲ್ಲೂ ಭಾರೀ ಹೆಚ್ಚಳ: ಯುದ್ಧ ಮುಂದುವರೆದರೆ ಏನಾಗುತ್ತೆ?

Share
3 Min Read
SHARE

newsics.com

ಇಸ್ರೇಲ್-ಇರಾನ್-ಅಮೆರಿಕಾದ ಮಧ್ಯೆ ಮುಂದುವರೆದ ಯುದ್ಧದ ಪರಿಣಾಮಗಳು ಭಾರತದ ಮೇಲೆ ಪರಿಣಾಮ ಬೀರಿದೆ. ಭಾರತದ ಮಾರುಕಟ್ಟೆಗೆ ತೀವ್ರವಾಗಿ ತಟ್ಟಿವೆ.ದಿನ ಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಅಡುಗೆ ಮನೆಯಿಂದ ಹಿಡಿದು ಚಿನ್ನದ ಅಂಗಡಿ ವರೆಗೂ ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ ನೀಡಿದೆ.ಅಡುಗೆ ಎಣ್ಣೆಯ ಬೆಲೆ ಏರಿಕೆಯಷ್ಟೇ ಅಲ್ಲ, ದಿನನಿತ್ಯ ಬಳಸುವ ಹಲವು ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ಬೆಲೆ ಏರಿಕೆಯ ಬಿಸಿ ಜನರ ಜೇಬಿಗೆ ನೇರವಾಗಿ ತಾಗುತ್ತಿದೆ. ಇದರಿಂದ ಜನರು ಚಿಂತೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಬಳಕೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳ!ಸದ್ಯದ ಮಾರುಕಟ್ಟೆಯಲ್ಲಿ ದಿನ ಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ 10 ರಿಂದ 20% ಏರಿಕೆ ಕಂಡುಬಂದಿದೆ. ಅಪ್ಪಿತಪ್ಪಿ ಈ ಇರಾನ್ ಇಸ್ರೇಲ್, ಅಮೆರಿಕದ ಮಧ್ಯೆ ನಡೆಯುತ್ತಿರುವ ಈ ಯುದ್ಧ ಇನ್ನೊಂದು ವಾರ ಮುಂದುವರೆದರೆ ಬೆಲೆಗಳು 50% ವರೆಗೂ ಏರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದು ಜನರಿಗೆ ನುಂಗಲಾರದ ತುಪ್ಪವಾಗುವ ಸಾಧ್ಯತೆ ದಟ್ಟವಾಗಿದೆ.ಬೆಲೆ ಏರಿಕೆಗೆ ಮುಖ್ಯ ಕಾರಣ ಹರ್ಮಾಜ್ ಜಲಸಂಧಿ (Strait of Hormuz)ಯಲ್ಲಿ ಸಾಗಣೆಯ ಅಡಚಣೆ. ಜಾಗತಿಕ ತೈಲ ಸರಬರಾಜಿನ ಸುಮಾರು 20% ಈ ಮಾರ್ಗದ ಮೂಲಕ ಹಾದುಹೋಗುತ್ತದೆ. ಇರಾನ್ ಹಡಗುಗಳನ್ನು ನಿಲ್ಲಿಸುವುದರಿಂದ ಸರಬರಾಜು ಕಡಿಮೆಯಾಗಿದ್ದು, ಹಡಗುಗಳು ಬದಲಿ ಮಾರ್ಗವಾದ ಗುಡ್ ಹೋಪ್ ಶಿಖರದ ಮೂಲಕ ಬರಬೇಕಾಗಿದೆ. ಇದು ಸಾಗಣೆ ವೆಚ್ಚವನ್ನು ಹೆಚ್ಚಿಸಿ, ಆಮದು ವೆಚ್ಚವನ್ನು ಏರಿಸಿದೆ. ಭಾರತ ತೈಲದ 85-90% ಆಮದು ಮಾಡಿಕೊಳ್ಳುವುದರಿಂದ ಇದರ ಪರಿಣಾಮ ತೀವ್ರವಾಗಿದೆ.ಬೆಲೆ ಏರಿಕೆಯ ಪ್ರಮುಖ ವಸ್ತುಗಳು ಯಾವುವು?ಅಡುಗೆ ಎಣ್ಣೆ: ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮ್ ಆಯಿಲ್ ಬೆಲೆಗಳು ಏರಿಕೆಯಾಗಿವೆ. ಯುದ್ಧದಿಂದ ತೈಲ ಸರಬರಾಜು ಅಡಚಣೆಗೊಳಗಾಗಿ ಎಣ್ಣೆ ಉತ್ಪಾದನೆ ಮತ್ತು ಸಾಗಣೆ ವೆಚ್ಚ ಹೆಚ್ಚಾಗಿದೆ.ಡ್ರೈ ಫ್ರೂಟ್ಸ್ ಮತ್ತು ದುಬಾರಿ ತರಕಾರಿಗಳು: ಖರ್ಜೂರ, ಬದಾಮಿ ಮುಂತಾದವುಗಳ ಬೆಲೆ ಏರಿಕೆಯಾಗಿದೆ. ಮಧ್ಯಪ್ರಾಚ್ಯದಿಂದ ಆಮದು ಮಾಡುವ ಈ ವಸ್ತುಗಳ ಸರಬರಾಜು ಕಡಿಮೆಯಾಗಿದೆ.ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ: ತೈಲ ಬೆಲೆ ಏರಿಕೆಯಿಂದ ಇಂಧನ ಬೆಲೆಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಭಾರತದ ತೈಲ ಆಮದಿನ ದೊಡ್ಡ ಭಾಗ ಈ ಮಾರ್ಗದ ಮೂಲಕ ಬರುತ್ತದೆ.ಚಿನ್ನ ಮತ್ತು ಬೆಳ್ಳಿ: ಸುರಕ್ಷಿತ ಆಸ್ತಿಯಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಯುದ್ಧದ ಭಯದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ.ರಸಗೊಬ್ಬರ (ಫರ್ಟಿಲೈಜರ್): ಸಲ್ಫರ್ ಮತ್ತು ಇತರ ಕಚ್ಚಾ ವಸ್ತುಗಳ ಸರಬರಾಜು ಅಡಚಣೆಯಿಂದ ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಇದು ಕೃಷಿ ವೆಚ್ಚ ಹೆಚ್ಚಿಸಿ, ಆಹಾರ ಧಾನ್ಯಗಳ ಬೆಲೆಯನ್ನೂ ಏರಿಸಬಹುದು.ಪೆಟ್ರೋಕೆಮಿಕಲ್ಸ್, ಟಯರ್, ಕೆಮಿಕಲ್ಸ್: ತೈಲ ಆಧಾರಿತ ಉತ್ಪನ್ನಗಳ ಬೆಲೆ ಏರಿಕೆ. ಟಯರ್ ಮತ್ತು ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳು ದುಬಾರಿಯಾಗುತ್ತವೆ.ಸೋಲಾರ್ ಪ್ಯಾನೆಲ್ ಮತ್ತು ಕೃಷಿ ಉಪಕರಣಗಳು: ಕೆಲವು ಕಚ್ಚಾ ವಸ್ತುಗಳ ಆಮದು ಅಡಚಣೆಯಿಂದ ಬೆಲೆ ಏರಿಕೆ.ಸದ್ಯದ ಮಾರುಕಟ್ಟೆಯಲ್ಲಿ ಈ ಎಲ್ಲಾ ವಸ್ತುಗಳ ಬೆಲೆಯಲ್ಲಿ 10-20% ಏರಿಕೆ ಕಂಡುಬಂದಿದ್ದು, ಯುದ್ಧ ಇನ್ನೊಂದು ವಾರ ಮುಂದುವರೆದರೆ ಬೆಲೆಗಳು 50% ವರೆಗೂ ಏರಬಹುದು ಎಂಬ ಆತಂಕವಿದೆ. ಇದರಿಂದ ಹಣದುಬ್ಬರ ಹೆಚ್ಚಾಗಿ, ಸಾಮಾನ್ಯ ಜನರ ಜೀವನ ವೆಚ್ಚ ಏರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ದಿನಸಿ ಅಂಗಡಿಗಳು, ಹೋಟೆಲ್‌ಗಳು ಮತ್ತು ಕುಟುಂಬಗಳು ಈ ಬೆಲೆ ಏರಿಕೆಯಿಂದ ನೇರ ಪ್ರಭಾವಕ್ಕೊಳಗಾಗುತ್ತಿವೆ.ಈ ಯುದ್ಧದ ಪರಿಣಾಮಗಳು ಭಾರತದ ಆರ್ಥಿಕತೆಗೆ ದೊಡ್ಡ ಆಘಾತ ನೀಡಲಿದೆ. ಸರ್ಕಾರ ಆಮದು ಮೂಲಗಳನ್ನು ವೈವಿಧ್ಯಗೊಳಿಸಿ, ಸಬ್ಸಿಡಿ ನೀಡಿ ಅಥವಾ ಬದಲಿ ಮಾರ್ಗಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕು. ಆದರೆ ಜಾಗತಿಕ ಶಾಂತಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ.

ಇಸ್ರೇಲ್-ಇರಾನ್ ಸಮರಕ್ಕೆ ಶೀಘ್ರವೇ ಬ್ರೇಕ್?

TAGGED:The price of all these items has increased drastically: What will happen if the war continues?
Share This Article
Facebook Twitter Copy Link Print
Previous Article ಮೆಟಾ ‘AI ಕನ್ನಡಕ’ ಬಳಸುತ್ತಿದ್ದೀರಾ? ಹಾಗಾದ್ರೆ ಎಚ್ಚರ!
Next Article ಭಾರತೀಯ ಇನ್‌ಫ್ಲುಯೆನ್ಸರ್ ಭೀಕರ ಹ*ತ್ಯೆ; ಮನೆಯೊಳಗೆ ನುಗ್ಗಿ ಚುಚ್ಚಿ ಚುಚ್ಚಿ ಮುಗಿಸೇಬಿಟ್ರು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?