https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
ಕೋಲಾರದ ಕೆಜಿಎಫ್ನಲ್ಲಿರುವ ಮುಚ್ಚಿದ್ದ ಚಿನ್ನದ ಗಣಿಯಲ್ಲಿ ಬಂಗಾರದ ಮಣ್ಣು ಕದ್ದಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನದ ಅದಿರು ಇದ್ದ ಮಣ್ಣನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
ಭಾರತ್ ಗೋಲ್ಡ್ ಮೈನ್ಸ್ ಸಂಸ್ಥೆಗೆ ಸೇರಿದ ಗಿಲ್ಬರ್ಟ್ ಶಾಪ್ಟ್ ಹೆಸರಿನ ಮೈನಿಂಗ್ ಪ್ರದೇಶದಲ್ಲಿ ಕಳ್ಳರು ಪ್ರತ್ಯೇಕವಾಗಿ 2 ಬಾರಿ ಮಣ್ಣು ಕದ್ದಿದ್ದರು. ಫೆಬ್ರವರಿ 6 ಮತ್ತು, ಫೆ. 10 ರಂದು 12 ಮೂಟೆಗಳಷ್ಟು ಮಣ್ಣು ಕಳವು ಮಾಡಿದ್ದರು. ಸದ್ಯ, 2 ಪ್ರಕರಣದಲ್ಲಿ ಒಟ್ಟು 14 ಆರೋಪಿಗಳನ್ನ ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಮೂಟೆಗಳಷ್ಟು ಚಿನ್ನದ ಅದಿರು ಮಿಶ್ರಿತ ಮಣ್ಣು ಯಶಸ್ವಿಯಾಗಿ ಹಿಂಪಡೆಯಲಾಗಿದೆ. ಆರೋಪಿಗಳ ವಿರುದ್ಧ BNS ಹಾಗೂ ಕರ್ನಾಟಕ ಮೈನಿಂಗ್ ಆಕ್ಟ್ ನಡಿ ಕೆಜಿಎಫ್ ನಗರದ ಉರಿಗಾಂ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಘಟನೆ ಫೆಬ್ರವರಿ 15ರಂದು ಬೆಳಗ್ಗೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸಂಪೂರ್ಣ ಸೆರೆಯಾಗಿದೆ. ಬೆಳ್ಳಂಬೆಳಗ್ಗೆ ಅಂಗಡಿ ಓಪನ್ ಮಾಡುವ ಸಮಯದಲ್ಲಿ ಬಂದ ಖದೀಮ ಸಿಗರೇಟ್ ಕೇಳುವ ನೆಪದಲ್ಲಿ ಒಳಗೆ ಬಂದು ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸರಿಗಮಪ ಲಿಟಲ್ ಚಾಂಪ್ಸ್ ಹೊಸ ಆವೃತ್ತಿ ಶುರು; ವಾಟ್ಸ್ಆ್ಯಪ್, ಆನ್ಲೈನ್ನಲ್ಲೂ ಕಳಿಸ್ಬೋದು ಹಾಡು