Subscribe ನ್ಯೂಸಿಕ್ಸ್ ಕನ್ನಡ
newsics.com
ಧಾರವಾಡದ 20 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವಕ ಕೊರಿಯನ್ ಗೇಮ್ ಅಡಿಕ್ಷನ್ ಗೆ ಬಲಿಯಾಗಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಧಾರವಾಡದ ಮಂಗಳಕಟ್ಟಿ ಪ್ಲಾಟ್ ನಲ್ಲಿ 20 ವರ್ಷದ ವಿಕಾಸ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಅದಲ್ಲದೇ, ಸಾವಿಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಕೂಡ ಬರೆದಿಟ್ಟಿದ್ದ.
ಪಿಯುಸಿ ಮುಗಿಸಿದ್ದ ವಿಕಾಸ್, ಮನೆಯಲ್ಲಿಯೇ ಇದ್ದನಂತೆ. ನಿರಂತರವಾಗಿ ಕೊರಿಯನ್ ಗೇಮ್ ಆಡುತ್ತಿದ್ದನಂತೆ. ಆದರೆ ಈ ಬಗ್ಗೆ ಮನೆಯಲ್ಲಿ ಗೊತ್ತಿರಲಿಲ್ಲ ಎನ್ನಲಾಗಿದೆ. ಕೊರಿಯನ್ ಗೇಮ್ ಗೆ ಅಡಿಕ್ಟ್ ಆಗಿದ್ದ ವಿಕಾಸ್ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಾವಿನ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದಿದ್ದರು. ಪರಿಶೀಲಿಸಿದಾಗ ವಿದ್ಯಾರ್ಥಿ ಕೊರಿಯನ್ ಗೇಮ್ ಆಡುತ್ತಿದ್ದ ಎಂಬುದು ಬಯಲಾಗಿದೆ. ಆನ್ ಲೈನ್ ಗೇಮ್ ಗೀಳು ವಿಕಾಸ್ ನನ್ನು ಬಲಿಪಡೆದಿದೆ ಎಂದು ಗೊತ್ತಾಗಿದೆ..
ಮಾರುಕಟ್ಟೆಗೆ ಲಗ್ಗೆ ಇಟ್ಟ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಕವಡೆ ಕಾಸಿನ ಬೆಲೆಗೆ ಸಿಗುವ ‘ನಕಲಿ’ ಬಂಗಾರ