https://youtube.com/shorts/vtmMY3C33B4?si=6NGHSVR8AcxO6HfD
Subscribe ನ್ಯೂಸಿಕ್ಸ್ ಕನ್ನಡ
newsics.com
ಹಿರಿಯ ನಟಿ ಬಿ ಜಯಶ್ರೀ ಅವರನ್ನು ಭೂಮಾಪನ ಇಲಾಖೆ ಅಧಿಕಾರಿ ಒಬ್ಬ ಅಲೆದಾಡಿಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಭೂ ಮಾಪನ ಕಚೇರಿಯಲ್ಲಿ ನಡೆದಿದೆ.
ಸರ್ವೆಗಾಗಿ ನಟಿ ಬಿ.ಜಯಶ್ರೀ ಅವರನ್ನು ಅಲೆದಾಡಿಸಲಾಗಿದೆ. ಜೀ.ವಿ ಮಾಲತಮ ಆರ್ಟ್ ಟ್ರಸ್ಟಿಗೆ ಐದು ಗುಂಟೆ ಜಮೀನು ದಾನ ಮಾಡಿದ್ದರು. ಗುಬ್ಬಿಯಲ್ಲಿ ರಂಗ ಚಟುವಟಿಕೆಗಾಗಿ 5 ಗುಂಟೆ ಜಾಗ ಕೊಟ್ಟಿದ್ದರು. ಈ ಜಾಗದ ಸರ್ವೆಗೆ ಅರ್ಜಿಯನ್ನು ಬಿ. ಜಯಶ್ರೀ ಸಲ್ಲಿಸಿದ್ದಾರೆ.ಅರ್ಜಿ ಶುಲ್ಕ ಕೂಡ ಮೂರುವರೆ ಸಾವಿರ ರೂಪಾಯಿ ಪಾವತಿ ಆಗಿದ್ದರೂ ಸರ್ವೇ ಆಗಿಲ್ಲ. ಕಾರಣ ಕೇಳಿದರೆ ಯಾರು ಕೂಡ ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದು ಸರ್ವೆ ಅಧಿಕಾರಿ ವಿರುದ್ಧ ಬಿ ಜಯಶ್ರೀ ಗಂಭೀರವಾಗಿ ಆರೋಪ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಆತ್ಮ*ಹ*ತ್ಯೆ, ಏನು ಕಾರಣ?