https://youtube.com/shorts/Z7vopgc72sA?si=LETDfO3oS1naHfBk
Subscribe ನ್ಯೂಸಿಕ್ಸ್ ಕನ್ನಡ
newsics.com
ಹೊಸದಿಲ್ಲಿ: ಇಂದು ಮಹಾರಾಷ್ಟ್ರ ರಾಜಕೀಯದಲ್ಲಿ ಸೂತಕದ ಛಾಯೆ ಆವರಿಸಿದ್ದು, ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಇಂದು(ಜ.28) ಮೃತಪಟ್ಟಿದ್ದಾರೆ.
ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನಿಂದ ಖಾಸಗಿ ಜೆಟ್ ಬಾರಮತಿಗೆ ತೆರಳಿದ್ದರು. ಈ ವೇಳೆ ಬಾರಮತಿ ಸಮೀಪ ಲ್ಯಾಂಡಿಂಗ್ ವೇಳೆ ಏಕಾಏಕಿ ವಿಮಾನ ಪತನಗೊಂಡಿದ್ದು, ಅಜಿತ್ ಪವಾರ್ ಜೊತೆ ವಿಮಾನದಲ್ಲಿದ್ದ ಇಬ್ಬರು ಪೈಲಟ್, ಇಬ್ಬರು ಸಿಬ್ಬಂದಿಗಳು ಸೇರಿ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ.
ಅಜಿತ್ ಪವಾರ್ ಅವರ ನಿಧನದ ನಂತರ, ಬಾರಾಮತಿ ಮತ್ತು ಮರಾಠವಾಡ ರಾಜಕೀಯದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಅವರ ಕುಟುಂಬದಲ್ಲಿ ಅವರ ಪತ್ನಿ, ಪ್ರಸ್ತುತ ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಮತ್ತು ಅವರ ಇಬ್ಬರು ಪುತ್ರರಾದ ಪಾರ್ಥ್ ಪವಾರ್ ಮತ್ತು ಜಯ್ ಪವಾರ್ ಸೇರಿದ್ದಾರೆ.
ಪಾರ್ಥ್ ಪವಾರ್: ಅವರು 2019 ರಲ್ಲಿ ಮಾವಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಅವರು ಸೋಲನ್ನು ಎದುರಿಸಿದರೂ, ಈಗ ಅವರು ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಪಡೆದುಒಳ್ಳಬಹುದು.
ಸುನೇತ್ರಾ ಪವಾರ್: ಅವರು ದಕ್ಷ ಆಡಳಿತಾಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಲ್ಪಟ್ಟಿದ್ದಾರೆ. ಅಜಿತ್ ಪವಾರ್ ಅವರ ಭದ್ರಕೋಟೆಯಾದ ಬಾರಾಮತಿಯನ್ನು ನಿಭಾಯಿಸಲು ಅವರನ್ನು ಅತ್ಯಂತ ಶಕ್ತಿಶಾಲಿ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ.
ಜಯ್ ಪವಾರ್: ಅವರು ಪ್ರಸ್ತುತ ಕುಟುಂಬ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ, ಆದರೆ ಈ ಸಂದರ್ಭದಲ್ಲಿ ಅವರು ರಾಜಕೀಯ ಪ್ರವೇಶಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಅಜಿತ್ ಪವಾರ್ ಅವರ ನಿಧನವು ಪವಾರ್ ಕುಟುಂಬವನ್ನು ಮತ್ತೊಮ್ಮೆ ಹತ್ತಿರಕ್ಕೆ ತಂದಿದೆ. ಕಹಿಯ ಹೊರತಾಗಿಯೂ, ಇದು ಹಿರಿಯ ನಾಯಕ ಶರದ್ ಪವಾರ್ ಅವರಿಗೆ ವೈಯಕ್ತಿಕ ಮತ್ತು ಸರಿಪಡಿಸಲಾಗದ ನಷ್ಟವಾಗಿದೆ. ಎನ್ಸಿಪಿಯ ಎರಡು ಬಣಗಳು (ಅಜಿತ್ ಬಣ ಮತ್ತು ಶರದ್ ಪವಾರ್ ಬಣ) ಈಗ ಮತ್ತೆ ಒಂದಾಗುತ್ತವೆಯೇ ಎಂಬ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಆರಂಭವಾಗಿವೆ.