Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾವೇರಿ ಶ್ರೀ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು. ಹಾವೇರಿ ಎಸ್ಪಿ ಯಶೋಧಾ ಅವರು ಕೂಡ ಭಾಗಿ ಆಗಿ ವೇದಿಕೆಯಲ್ಲಿ ಮಾತನಾಡಿದ್ದಾರೆ.
ಸಾಕಷ್ಟು ಹೆಣ್ಣು ಮಕ್ಕಳು ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಬಿಟ್ಟು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೀರಾ. ಈ ಜಾತ್ರೆಯ ಮಹತ್ವ ಏನು ಎನ್ನುವುದು ಗೊತ್ತಾಗುತ್ತದೆ. ಧಾರಾವಾಹಿಗಳನ್ನು ನೋಡಬೇಡಿ ಎಂದು ಹೇಳಲ್ಲ. ಈ ಕಾರ್ಯಕ್ರಮದಲ್ಲಿ ಆ ವಿಚಾರ ಬೇಡ. ಆದರೂ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸ್ ಅಧಿಕಾರಿ ಎನ್ನುವುದು ನೆನಪಾಗುತ್ತದೆ. ಧಾರಾವಾಹಿಯವರು ನನ್ನ ಬಗ್ಗೆ ಬೇಸರಗೊಂಡರೂ ಪರವಾಗಿಲ್ಲ. ಮಹಿಳೆಯರು ಧಾರಾವಾಹಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೀರಾ ಅಂದ್ರೆ, ಹಿಂದಿನ ಬಾಗಿಲಿನಿಂದ ಕಳ್ಳ ಬಂದು ಕಳ್ಳತನ ಮಾಡಿಕೊಂಡು ಹೋದ್ರು ಗೊತ್ತಾಗಲ್ಲ. ಇಂತಹ ಉದಾಹರಣೆಗಳು ಸಾಕಷ್ಟಿವೆ ಎಂದು ಎಸ್ಪಿ ಯಶೋಧಾ ಹೇಳಿರುವುದು ವೈರಲ್ ಆಗ್ತಿದೆ.
ಮಾತು ಮುಂದುವರೆಸಿರುವ ಎಸ್ಪಿ ಯಶೋಧಾ ಮಕ್ಕಳಿಗೆ ಓದುವಂತೆ ಹೇಳಿ ಕೂರಿಸುವುದು. ನೀವು ಧಾರಾವಾಹಿ ನೋಡುವುದು, ಮಕ್ಕಳಿಗೆ ಓದಿನ ಬಗ್ಗೆ ಗಮನ ಹೇಗೆ ಹರಿಯುತ್ತದೆ.
ಎಲ್ಲಾ ಮಕ್ಕಳು ಫಸ್ಟ್ ರ್ಯಾಂಕ್ ಬರಬೇಕು ಅಂದ್ರೆ, ಸಾಧ್ಯವಿಲ್ಲ. ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಓದಿದ ಮಾತ್ರಕ್ಕೆ ಏನೋ ಸಾಧಿಸಿಬಿಡ್ತಾರೆ ಎನ್ನುವುದು ತಪ್ಪು. ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿ ಸಾಧನೆ ಮಾಡಲು ಸಾಧ್ಯವಿದೆ. ಅದನ್ನು ಹೇಳಿ. ನಾನು ಇತ್ತೀಚೆಗೆ ನನ್ನ ಮಗಳ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ಗೆ ಹೋಗಿದ್ದೆ. ಅಲ್ಲಿ ಪೇರೆಂಟ್ಸ್ ಹೋಗಿ ಶಿಕ್ಷಕರಿಗೆ ಕೇಳುವ ಪ್ರಶ್ನೆಗಳನ್ನು ಕೇಳಿ ನನಗೆ ಶಾಕ್ ಆಯಿತು ಎಂದಿದ್ದಾರೆ. ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ, ಸಮಾಜದಲ್ಲಿ ಬದುಕುವುದನ್ನು ಕಲಿಸಿ, ಓದು ಒಂದೇ ಎಲ್ಲವೂ ಅಲ್ಲ ಎಂದು ಎಸ್ಪಿ ಯಶೋಧಾ ವಿವರಿಸಿದ್ದಾರೆ
https://www.newsics.com/2025/12/28/young-man-commits-suicide-after-taking-selfie-video/