Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ತೆರೆಗೆ ಸಜ್ಜಾಗಿದೆ. ಮುಂದಿನ ಗುರುವಾರ ಕ್ರಿಸ್ಮಸ್ ಪ್ರಯುಕ್ತ ಥಿಯೇಟರ್ ಗೆ ಬರ್ತಾ ಇದೆ. ಅದಕ್ಕೂ ಮುನ್ನ ಅದ್ಧೂರಿ ಪ್ರಚಾರದ ತೇರು ಎಳೆಯಲು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಹೋಗಿದ್ರು. ನೆಹರೂ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮಾರ್ಕ್ ಪ್ರೀ ರಿಲೀಸ್ ಈವೆಂಟ್ ಮಾಡಿದ್ರು.
ಇನ್ನು ಈ ಸಮಾರಂಭದಲ್ಲಿ ಕಿಚ್ಚ ಸುದೀಪ್ ಸ್ವಲ್ಪ ರೋಷ ಆವೇಶದಲ್ಲೇ ಮಾತು ಶುರು ಮಾಡಿದ್ರು. ಹುಬ್ಬಳ್ಳಿಯಲ್ಲಿ ಮಾತಾಡಿದ್ರೆ ಎಲ್ಲಿಗೆ ಮುಟ್ಬೇಕೋ ಅಲ್ಲಿಗೆ ಮುಟ್ಟುತ್ತೆ. ಅದಕ್ಕಾಗಿ ಇಲ್ಲಿ ಈವೆಂಟ್ ಮಾಡಿದ್ವಿ ಅಂದ್ರು.
ಹಾಗೆ ತಮ್ಮ ಮಾತನ್ನ ಮುಂದುವರೆಸುತ್ತ ನನ್ನ ಇಷ್ಟಪಡೋರಿಗಾಗಿ, ಸ್ನೇಹಿತರಿಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದ್ರೆ ನನ್ನ ಮೌನದಿಂದ ನನ್ನ ಅಭಿಮಾನಿಗಳ ಮೇಲೆ ಕಲ್ಲು ತೂರುವ ಕೆಲಸ ಆಗ್ತಾ ಇದೆ. ಇನ್ನು ಸಹಿಸಲ್ಲ. ಬಾಯಿ ಮುಚ್ಕೊಂಡು ಇರಲ್ಲ ಅಂತ ಗುಡುಗಿದ್ರು. ಅಷ್ಟೇ ಅಲ್ಲದೆ 25ನೇ ತಾರಿಖು ಸಿನಿಮಾ ಬರ್ತಾ ಇದೆ. ಅಂದು ಯುದ್ಧಕ್ಕೆ ಒಂದು ಪಡೆ ಸಜ್ಜಾಗಿದೆ. ನಾವು ಸಹ ಈ ಸಲ ಯುದ್ಧಕ್ಕೆ ಸಿದ್ದ ಯಾಕೆಂದ್ರೆ ನಾವು ಮಾತಿಗೆ ಬದ್ಧ ಅಂತೇಳುವ ಮೂಲಕ ನೇರವಾಗಿ ಯುದ್ಧ ಘೋಷಣೆಯನ್ನೇ ಮಾಡಿಬಿಟ್ರು.
ಕಿಚ್ಚ ಸುದೀಪ್ ಅವರ ಈ ಮಾತು ಇದೀಗ ಸಾಕಷ್ಟು ವೈರಲ್ ಆಗ್ತಾ ಇದೆ.. ಅಷ್ಟಕ್ಕೂ ಕಿಚ್ಚನ ಯುದ್ಧ ಘೋಷಣೆ ಯಾರ ವಿರುದ್ಧ, ಅವ್ರು ಹಾಗೆ ಹೇಳಿದ್ರ ಉದ್ಧೇಶ ಏನು ಅಂತೆಲ್ಲಾ ಚರ್ಚೆ ನಡೀತಾ ಇದೆ.
ಇನ್ನು ಮಾರ್ಕ್’ ಸಿನಿಮಾದ ಪ್ರಚಾರ ಆರಂಭವಾದಾಗಿನಿಂದಲೂ ದರ್ಶನ್ ಅಭಿಮಾನಿಗಳು ಸಿನಿಮಾದ ವಿರುದ್ಧ ಕಿತಾಪತಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ‘ಮಾರ್ಕ್’ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ, ‘ಕಾವೇರಿ ತಮಿಳಿಗೆ ಸೇರಬೇಕು’ ಎಂದು ಹೇಳಿದ್ದಾರೆಂದು ನಕಲಿ ಪೋಸ್ಟ್ ತಯಾರಿಸಿ ಹಂಚಿಕೊಂಡು ಸುಳ್ಳು ಸುದ್ದಿ ಹಬ್ಬುವ ಯತ್ನ ಮಾಡಿದ್ದರು. ‘ಡೆವಿಲ್’ ಸಿನಿಮಾದ ಒಂಬತ್ತು ಸಾವಿರ ಪೈರಸಿ ಲಿಂಕ್ಗಳನ್ನು ತೆಗೆದು ಹಾಕಿದ್ದೇವೆ, ಈಗ ನಿಮಗೂ ನಾವು ಇದೇ ರೀತಿ ಮಾಡಲಿದ್ದೇವೆ ಎನ್ನುವ ಮೂಲಕ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು. ಬುಕ್ಮೈ ಶೋನಲ್ಲಿ ಸಹ ರೇಟಿಂಗ್ ಕಡಿಮೆ ಮಾಡುವ ಪ್ರಯತ್ನವೂ ನಡೆದಿತ್ತು.
ಇದೆಲ್ಲವನ್ನೂ ಗಮನಿಸಿದ ಸುದೀಪ್ ಅವರು ಬಹುಷಃ ಹುಬ್ಬಳ್ಳಿಯಲ್ಲಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸುದೀಪ್ ಅವರ ಮಾತುಗಳನ್ನೇ ಇರಿಸಿಕೊಂಡು ದರ್ಶನ್ ಅಭಿಮಾನಿಗಳು ಇದೀಗ ಇನ್ನಷ್ಟು ನೆಗೆಟಿವ್ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ‘ಮಾರ್ಕ್’ ಸಿನಿಮಾಕ್ಕೆ ಹಾನಿ ಮಾಡಿಯೇ ಸಿದ್ಧ ಎಂದು ಕೆಲವು ಕಿಡಿಗೇಡಿ ದರ್ಶನ್ ಅಭಿಮಾನಿಗಳು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.