Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೊಸ ವರ್ಷಕ್ಕೆ ಬೆಂಗಳೂರು ನಿವಾಸಿಗಳಿಗೆ ಒಂದು ಶಾಕಿಂಗ್ ಸುದ್ದಿ ಬಂದಿದೆ. ಬೆಂಗಳೂರು ನೀರು ಸರಬರಾಜು ಮತ್ತು ನಿರ್ವಹಣಾ ಮಂಡಳಿ ಕಾವೇರಿ ನೀರಿನ ದರವನ್ನು ಏರಿಕೆ ಮಾಡಲಿದೆ. ಬರೋಬ್ಬರಿ 3% ಏರಿಸುವ ನಿರ್ಧಾರ ಕೈಗೊಂಡಿದ್ದು, ಮುಂದಿನ ಆರ್ಥಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಏಪ್ರಿಲ್ 2026ರಿಂದ ಈ ಹೊಸ ದರಗಳು ಜಾರಿಯಾಗಲಿವೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಜಲಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕಳೆದ 11 ವರ್ಷಗಳಿಂದ ನೀರಿನ ದರವನ್ನು ಏರಿಸದೆ ಇದ್ದರೂ, ನಷ್ಟ ಹೆಚ್ಚುತ್ತಿದೆ. ಪ್ರತಿ ತಿಂಗಳು ₹200 ಕೋಟಿ ವ್ಯಯವಾಗುತ್ತದೆಯಾದರೂ, ದರ ಸಂಗ್ರಹ ₹130 ಕೋಟಿಗಷ್ಟೇ ಸೀಮಿತವಾಗಿದೆ.
ವಿದ್ಯುತ್ ಮತ್ತು ನಿರ್ವಹಣಾ ವೆಚ್ಚಗಳು ಕಳೆದ 10 ವರ್ಷಗಳಲ್ಲಿ 107% ಮತ್ತು 122.5% ಏರಿಕೆಯಾಗಿವೆ. ಕಾವೇರಿ ಸ್ಟೇಜ್ 5 ಯೋಜನೆಯೊಂದಿಗೆ ನಷ್ಟ ₹900 ಕೋಟಿಗೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಡಳಿ ಆಡಳಿತ ಮಂಡಳಿ ದರ ಏರಿಕೆಗೆ ನಿರ್ಧರಿಸಿದ್ದು, ಪ್ರತಿ ವರ್ಷ 3% ಹೆಚ್ಚಳವನ್ನು ಜಾರಿಗೊಳಿಸುವ ಯೋಜನೆಯನ್ನು ಘೋಷಿಸಿದೆ.