newsics.com
ರಾಜಸ್ಥಾನದ ಬಾಡಿಗೆ ಮನೆಯೊಂದರಲ್ಲಿ ನೀಲಿ ಡ್ರಮ್ನಲ್ಲಿ ಯುವಕನನ್ನು ಕೊಂದು ಹೂಳಿದ ಪ್ರಕರಣ ಬೆಳಕಿಗೆ ಬಂದಿದೆ.
ನೀಲಿ ಡ್ರಮ್ಗೆ ಉಪ್ಪು ಸೇರಿಸಲಾಗಿದೆ. ಅಂದಿನಿಂದ ಪತ್ನಿ ಮಕ್ಕಳು ಸೇರಿದಂತೆ ಇಡೀ ಕುಟುಂಬ ತಲೆಮರೆಸಿಕೊಂಡಿದೆ. ಮನೆ ಮಾಲೀಕರ ಮಗ ಕೂಡ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಕೊಲೆಯಾದ ಯುವಕನನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ.
ಹಂಸರಾಜ್ ಪತ್ನಿ ಮತ್ತು ಹಿರಿಯ ಮಗ ಹರ್ಷಲ್, ಮಗಳು ನಂದಿನಿ ಮತ್ತು ಕಿರಿಯ ಮಗ ಗೋಲು ಅವರೊಂದಿಗೆ ವಾಸಿಸುತ್ತಿದ್ದರು. ಘಟನೆಯ ನಂತರ ಎಲ್ಲರೂ ನಾಪತ್ತೆಯಾಗಿದ್ದಾರೆ.
ಉತ್ತರ ಪ್ರದೇಶದ ಮೀರತ್ ಪ್ರಕರಣವನ್ನೇ ಹೋಲುವ ಈ ಸಂವೇದನಾಶೀಲ ಪ್ರಕರಣ ಖೈರ್ತಾಲ್ ತಿಜಾರಾ ಜಿಲ್ಲೆಯ ಕಿಶನ್ಗಢಬಾಸ್ ಪ್ರದೇಶದಲ್ಲಿ ನಡೆದಿದೆ.
ಮನೆಯ ಛಾವಣಿಯ ಮೇಲೆ ಇರಿಸಲಾಗಿದ್ದ ನೀಲಿ ಡ್ರಮ್ನಿಂದ ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಮೃತ ಯುವಕ ಉತ್ತರ ಪ್ರದೇಶದ ನಿವಾಸಿ. ಸುಮಾರು ಒಂದೂವರೆ ತಿಂಗಳಿನಿಂದ ಕಿಶನ್ಗಢಬಾಸ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಮೃತರು ಸ್ಥಳೀಯ ಇಟ್ಟಿಗೆಗೂಡುಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.