newsics.com
ನಟ ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ರದ್ದಾಗಿದೆ. ಹೀಗಾಗಿ ಮತ್ತೆ ಅವರು ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ಇಂದುನಟ ದರ್ಶನ್ ಅವರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾದರು. ಅವರ ಕುಶಲೋಪರಿ ವಿಚಾರಿಸಿದಂತ ಅವರು ಹಣ್ಣು ನೀಡಿ, ಜೈಲಿನಿಂದ ವಾಪಾಸ್ ಆದರು.
ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾದರು. ಸಾಮಾನ್ಯ ಎಂಟ್ರಿ ಹಿನ್ನಲೆಯಲ್ಲಿ ಅರ್ಧ ತಾಸು ಮಾತ್ರವೇ ಜೈಲು ಅಧಿಕಾರಿಗಳು ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿಗೆ ಅವಕಾಶ ಮಾಡಿಕೊಟ್ಟರು.
ಸಾಮಾನ್ಯ ಎಂಟ್ರಿ ಹಿನ್ನೆಲೆ ಅರ್ಧ ತಾಸು ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ. ಹಣ್ಣು ನೀಡಿ ಕುಶಲೋಪರಿ ವಿಚಾರಿಸಿ ವಿಜಯಲಕ್ಷ್ಮಿ ಅವರು ವಾಪಸ್ ಆಗಿದ್ದಾರೆ. ಪತ್ನಿ ಬಳಿ ಮಗನ ಬಗ್ಗೆ ದರ್ಶನ್ ವಿಚಾರಿಸಿದ್ದಾರೆ.
ಪೊಲೀಸ್ ಠಾಣೆವರೆಗು ವಿಜಯಲಕ್ಷ್ಮಿ ಅವರ ಕಾರನ್ನು ಜೈಲಿನ ಸಿಬ್ಬಂದಿ ಬಿಟ್ಟಿಲ್ಲ. ಜೈಲು ಚೆಕ್ ಪೋಸ್ಟ್ ಬಳಿ ಕಾರು ತಡೆದ ಜೈಲು ಸಿಬ್ಬಂದಿ ಅಲ್ಲಿಂದ ಮುಂದೆ ಹೋಗದಂತೆ ತಡೆದಿದ್ದಾರೆ. ಕೊನೆಗೆ ಜೈಲು ಚೆಕ್ ಪೋಸ್ಟ್ ವರೆಗೆ ವಿಜಯಲಕ್ಷ್ಮಿ ವಅರು ನಡೆದುಕೊಂಡೇ ಬಂದಿದ್ದಾರೆ.
https://www.newsics.com/2025/08/18/cloudburst-in-dabaka-help-for-victims-urged/