newsics.com
ಗಾಜಿಯಾಬಾದ್: ಗುಪ್ತಚರ ಬ್ಯೂರೋ ಅಧಿಕಾರಿಯೊಬ್ಬರು ತನ್ನ ಸಹೋದರಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್ ನ ಗೋವಿಂದಪುರ ಪ್ರದೇಶದ ಮನೆಯಲ್ಲಿ ನಡೆದಿದೆ.
ಅವಿನಾಶ್ ಕುಮಾರ್ ಹಾಗೂ ಅವರ ಸಹೋದರಿ ಅಂಜಲಿ ಮೃತ ಅಣ್ಣ-ತಂಗಿ. ಇಬ್ಬರ ಮೃತದೇಹ ಮನೆಯ ರೂಮಿನಲ್ಲಿ ಪತ್ತೆಯಾಗಿದೆ.
ಮೃತರು ಗೋವಿಂದಪುರದ ಹೆಚ್ ಬ್ಲಾಕ್ ನ ಸುಖ್ ಬೀರ್ ಸಿಂಗ್ ಅವರ ಮಕ್ಕಳು. ಮಲತಾಯಿ ಇಬ್ಬರನ್ನೂ ಹಿಂಸಿಸುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಚಿಕ್ಕಮ್ಮ ಆರೋಪಿಸಿದ್ದಾರೆ. ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಣ್ಣ-ತಂಗಿ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.