newsics.com
ಭಾರತದ ಉಪರಾಷ್ಟ್ರಪತಿ ಆಗಿದ್ದ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ಕಳೆದ ರಾತ್ರಿ ರಾಜೀನಾಮೆ ನೀಡಿದ್ದಾರೆ. ಈಗ ದೇಶಕ್ಕೆ ಹೊಸ ಉಪರಾಷ್ಟ್ರಪತಿ ಆಯ್ಕೆ ಅನಿವಾರ್ಯವಾಗಿದೆ. ಇದೀಗ ಮುಂದಿನ ರಾಷ್ಟಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಇದೆ.
ಉಪಾಧ್ಯಕ್ಷರ ಚುನಾವಣೆಯನ್ನು ಮುಖ್ಯವಾಗಿ ಸಂವಿಧಾನದ 63 ರಿಂದ 71 ನೇ ವಿಧಿಗಳು ಮತ್ತು 1974 ರ ಉಪಾಧ್ಯಕ್ಷ (ಚುನಾವಣೆ) ನಿಯಮಗಳು ನಿಯಂತ್ರಿಸುತ್ತವೆ. ರಾಷ್ಟ್ರಪತಿ ನಂತರ ಉಪಾಧ್ಯಕ್ಷರು ದೇಶದಲ್ಲಿ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆ. ಉಪಾಧ್ಯಕ್ಷ ಹುದ್ದೆ ಈಗ ಖಾಲಿ ಇರುವುದರಿಂದ, ಚುನಾವಣಾ ಆಯೋಗವು ಆ ಕಚೇರಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ.ಸಂವಿಧಾನವು ಖಾಲಿ ಹುದ್ದೆಯನ್ನು “ಸಾಧ್ಯವಾದಷ್ಟು ಬೇಗ” ಭರ್ತಿ ಮಾಡಬೇಕೆಂದು ಆದೇಶಿಸುತ್ತದೆ.
ಭಾರತದಲ್ಲಿ ರಾಷ್ಟ್ರಪತಿ ಆಯ್ಕೆಗೆ ಸಂಸತ್ನ ಉಭಯ ಸದನಗಳ ಸದಸ್ಯರು ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಯ ಸದಸ್ಯರು ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮಾತ್ರ ಮತ ಚಲಾವಣೆ ಹಕ್ಕು ಹೊಂದಿದ್ದಾರೆ. ರಾಜ್ಯಸಭೆ, ಲೋಕಸಭೆಯ ಆಯ್ಕೆಯಾದ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಗಳ ಶಾಸಕರಿಗೆ ಮತದಾನದ ಹಕ್ಕು ಇಲ್ಲ.
ದೆಹಲಿ ರಾಜಕಾರಣದ ಮೂಲಗಳ ಪ್ರಕಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪರಾಷ್ಟ್ರಪತಿ ಹುದ್ದೆಗೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸದ್ಯಕ್ಕೆ ಇದು ಊಹಾಪೋಹ ಮಾತ್ರ. ಇತ್ತೀಚೆಗೆ ನಿತೀಶ್ ಕುಮಾರ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡಗಳು ಕೇಳುಬರುತ್ತಿದ್ದವು ಎನ್ನಲಾಗಿತ್ತು.
ಉಪರಾಷ್ಟ್ರಪತಿ ಹುದ್ದೆಗೆ ಅರ್ಹತೆಗಳೇನು?
- ಭಾರತದ ನಾಗರಿಕರಾಗಿರಬೇಕು
- ಕನಿಷ್ಠ 35 ವರ್ಷ ವಯಸ್ಸಾಗಿರಬೇಕು
- ರಾಜ್ಯಸಭೆಗೆ ಆಯ್ಕೆಯಾಗುವ ಅರ್ಹತೆ ಹೊಂದಿರಬೇಕು
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಡಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು
- ಸಂವಿಧಾನದ 66 ಮತ್ತು 67ನೇ ವಿಧಿಯಡಿ ವಿಧಿಸಿರುವ ಷರತ್ತು ಪೂರೈಸಬೇಕು
https://www.newsics.com/2025/07/22/crazy-lover-threatens-schoolgirl-with-knife-at-her-neck/