newsics.com
ಅಹಮದಾಬಾದ್ ವಿಮಾನ ದುರಂತವನ್ನು ವಾಯು ಅಪಘಾತಗಳ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಅಪಘಾತವೆಂದು ಪರಿಗಣಿಸಲಾಗಿದೆ. ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ ಒಟ್ಟು 274 ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಲಗೇಜ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಆದರೆ, ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆ ಸುರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿಮಾನದಲ್ಲಿದ್ದ ಎಲ್ಲವೂ ಸುಟ್ಟುಹೋಗಿದ್ದರೂ ಭಗವದ್ಗೀತೆ ಮಾತ್ರ ಹಾಗೆಯೇ ಇತ್ತು. ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದು, ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಮಾನ ಅಪಘಾತಕ್ಕೀಡಾದ ನಂತರ ಭಾರೀ ಬೆಂಕಿ ಕಾಣಿಸಿಕೊಂಡಿತು. ವಿಮಾನದಲ್ಲಿದ್ದ 1:25 ಲಕ್ಷ ಲೀಟರ್ ಇಂಧನ ದುರಂತದ ತೀವ್ರತೆಯನ್ನು ಹೆಚ್ಚಿಸಿತು. ವಿಮಾನದಲ್ಲಿದ್ದ ಜನರು ಮಾತ್ರವಲ್ಲದೆ ವಸ್ತುಗಳು ಸಹ ಸುಟ್ಟುಹೋಗಿವೆ. ಆದರೂ ಭಗವದ್ಗೀತೆಗೆ ಏನೂ ಆಗಿಲ್ಲ.
ಇದೀಗ ಈ ಕುರಿತ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಹಮದಾಬಾದ್ ವಿಮಾನ ದುರಂತದಲ್ಲಿ ಎಲ್ಲವೂ ಸರ್ವ ನಾಶವಾಯಿತು. ಆದರೆ ಭಗವದ್ಗೀತೆ ಒಳಗಿನಿಂದ ಹಾಗೇ ಇದೆ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು amdavad.clicks ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಕಾರ್ಯಾಚರಣೆಯ ಸಮಯದಲ್ಲಿ ಪತ್ತೆಯಾಗುವ ಭಗವದ್ಗೀತೆ ಪುಸ್ತಕವನ್ನು ಒಬ್ಬ ವ್ಯಕ್ತಿ ತೆರೆದು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಜೂನ್ 12 ರಂದು ಹಂಚಿಕೊಳ್ಳಲಾದ ಈ ವೀಡಿಯೊ 1.1 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
https://www.instagram.com/reel/DKzwri5hVCJ/?utm_source=ig_web_button_share_sheet
Flight tragedy ಅಪ್ಪನ ವ್ಯವಹಾರ ನೋಡಿಕೊಳ್ಳಲು ಎಂಬಿಎ ಮಾಡಿದ್ದ ಅಣ್ಣ- ತಂಗಿ ಸಾವು
Air India flight ವಿಮಾನ ದುರಂತ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆ