newsics.com
ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಕ್ಕೆ ಒಳಗಾಗ್ತಿರುವ ಪುರುಷರ ಸಂಖ್ಯೆ ಏರಿಕೆಯಾಗ್ತಿದೆ. ಇದೀಗ ಮಧ್ಯಪ್ರದೇಶದಲ್ಲಿ ಪತ್ನಿಯರ ಕಾಟಕ್ಕೆ ಪುರುಷರು ಸುಸ್ತಾಗಿದ್ದಾರೆ. ಒಂದೇ ವರ್ಷದಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಸಹಾಯವಾಣಿಗೆ ಕರೆ ಮಾಡಿ ಕಣ್ಣೀರು ಹಾಕ್ತಿದ್ದಾರೆ.
ಕಿರುಕುಳಕ್ಕೊಳಗಾದ ಪುರುಷರಿಗೆ ಸಹಾಯ ಮಾಡಲು ವಾಚ್ ಲೀಗ್ ಎಂಬ ಸಂಘಟನೆ ಶುರುವಾಗಿದೆ. ಮಧ್ಯಪ್ರದೇಶದಲ್ಲಿ ಅನೇಕ ಮಹಿಳೆಯರು, ಕಾನೂನನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಪುರುಷರ ಮೇಲೆ ಸುಳ್ಳು ಆರೋಪ ಹೊರಿಸಿ ಅವರಿಗೆ ತೊಂದ್ರೆ ನೀಡ್ತಿದ್ದಾರೆ. ಕಾನೂನಿನ ಹೆಸರಿನಲ್ಲಿ ಅವರಿಗೆ ಹಿಂಸೆ ನೀಡ್ತಿದ್ದಾರೆ.
ಅಶೋಕ ಗಾರ್ಡನ್ನಲ್ಲಿ ವಾಸಿಸುತ್ತಿದ್ದ ಉಮೇಶ್ ಸಲೋನಿಯಾ 2001 ರಲ್ಲಿ ಬಾಲಘಾಟ್ನ ಹುಡುಗಿಯನ್ನು ಮದುವೆಯಾಗಿದ್ರು. ಮದುವೆ ನಂತ್ರವೂ ಉಮೇಶ್ ಪತ್ನಿ ಓದು ಮುಂದುವರೆಸಿದ್ದಳು. ಎಂ.ಎಸ್ಸಿ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಓದು ಮುಗಿದ ನಂತ್ರ ಸುಮಾರು 8 ತಿಂಗಳು ನಾಪತ್ತೆಯಾಗಿದ್ಲು. ಪತ್ನಿಯನ್ನು ಹುಡುಕಿ ಸುಸ್ತಾಗಿದ್ದ ಉಮೇಶ್, ಬಾಲಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತ್ರ ಪ್ರತ್ಯಕ್ಷವಾಗಿದ್ದ ಪತ್ನಿ, ಉಮೇಶ್ ವಿರುದ್ಧವೇ ದೂರು ದಾಖಲಿಸಿದ್ದಳು. ವರದಕ್ಷಿಣೆ ಮತ್ತು ಕಿರುಕುಳದ ಆರೋಪ ಹೊರಿಸಿದ್ದಳು. ನ್ಯಾಯ ಸಿಗದೆ ಹೋದ್ರೆ ಅತುಲ್ ಹಾಗೆ ಆತ್ಮಹತ್ಯೆಯೊಂದೇ ನನಗಿರುವ ದಾರಿ ಎಂದಿದ್ದಾರೆ. ಇಲ್ಲಿನ ಅನೇಕರು ಇಂಥದ್ದೇ ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಪ್ರತಿ ದಿನ ಸಹಾಯವಾಣಿಗೆ ನೂರಾರು ಪುರುಷರು ಕರೆ ಮಾಡ್ತಿದ್ದಾರೆ. ಕೆಲಸ ಮಾಡಿ ಜೀವನ ಸಾಗಿಸುವ ಬದಲು ತಿಂಗಳ ಬಹು ಸಮಯವನ್ನು ಕೋರ್ಟ್ನಲ್ಲಿ ಕಳೆಯುತ್ತಿದ್ದಾರೆ.