newsics.com
ತೆಲಂಗಾಣ: ಮಹಿಳೆಯನ್ನು ನಿಂದಿಸಿದ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ವ್ಯಕ್ತಿಗೆ ಎರಡು ದಿನಗಳ ಕಾಲ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವ ಮತ್ತು ದಂಡ ಪಾವತಿಸುವ ಶಿಕ್ಷೆಯನ್ನು ಎಲ್.ಬಿ.ನಗರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದೆ.
ಗುರ್ರಮಗುಡ ನಿವಾಸಿ ಸಂಧ್ಯಾ ಎಂಬವರು 36 ವರ್ಷದ ರಮೇಶ್ ಎಂಬಾತನ ವಿರುದ್ಧ ಮೀರ್ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಗಳದ ಸಂದರ್ಭದಲ್ಲಿ ರಮೇಶ್ ತನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಿರುವುದಾಗಿ ಮತ್ತು ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಆರೋಪಿ ರಮೇಶ್ನನ್ನು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಎಲ್.ಬಿ.ನಗರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವ ಹಾಗೂ ದಂಡ ಪಾವತಿಸುವ ಶಿಕ್ಷೆಯನ್ನು ನೀಡಿದೆ.