newsics.com
ಬೆಂಗಳೂರು: ಬೇಸಿಗೆ ಬಿಸಿಲು ಏರಿ ಜನ ಸೆಕೆಯಿಂದ ತತ್ತರಿಸಿದ ವೇಳೆ ಶನಿವಾರ ಬೆಂಗಳೂರಿನ ಹಲವೆಡೆ ಮತ್ತು ರಾಜ್ಯದ ಕೆಲವೆಡೆ ಭರ್ಜರಿ ಮಳೆ ಸುರಿದು ತಂಪಾದ ವಾತಾವರಣ ಸೃಷ್ಟಿಸಿದೆ.
ಬೆಂಗಳೂರು ನಗರದ ಯಲಹಂಕ ಸುತ್ತಮುತ್ತ ಭರ್ಜರಿ ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.
ಹೆಬ್ಬಾಳ, ಮೇಖ್ರಿ ಸರ್ಕಲ್, ಭೂಪಸಂದ್ರದಲ್ಲೂ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಬೆಂಗಳೂರು ಗ್ರಾಮಾಂತರ ಭಾಗದ ದೇವನಹಳ್ಳಿ, ಗ್ರಾಮೀಣ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿದಿದೆ.
ಕೋಲಾರ ನಗರ, ಶ್ರೀನಿವಾಸಪುರ ಸೇರಿ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.ಹಾಸನ ಜಿಲ್ಲೆಯ ಬೇಲೂರಿನ ಕೆಲವುಕಡೆ ಆಲಿ ಕಲ್ಲು ಸಹಿತ ಭರ್ಜರಿ ಮಳೆ ಸುರಿದಿದೆ.