newsics.com
ನ್ಯೂಸಿಕ್ಸ್. ಕಾಮ್
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಕೃಷ್ಣ ಪಕ್ಷ ಸಪ್ತಮಿ
21-03-2025, ಶುಕ್ರವಾರ
# ಶಬರಿ ಜಯಂತಿ
# ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ರಥೋತ್ಸವ, ಪಡುಬಿದ್ರಿ
# ವಿಶ್ವ ಅರಣ್ಯ ದಿನ
# ವಿಶ್ವ ಕವನ ದಿನ
# ವಿಶ್ವ ಕೈ ಗೊಂಬೆ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 21/03/2025
ತಿಂಗಳು – ಮಾರ್ಚ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ಸಪ್ತಮಿ 28:23:14*
ಪಕ್ಷ – ಕೃಷ್ಣ
ನಕ್ಷತ್ರ – ಜ್ಯೇಷ್ಟ 25:44:49*
ಯೋಗ – ಸಿದ್ಧಿ 18:40:20
ಕರಣ – ವಿಷ್ಟಿ (ಭದ್ರ) 15:38:23
ಕರಣ – ಭವ
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಚೈತ್ರ
ಚಂದ್ರ ರಾಶಿ – ವೃಷ್ಚಿಕ till 25:44:49*
ಚಂದ್ರ ರಾಶಿ – ಧನು from 25:44:49*
ಸೂರ್ಯ ರಾಶಿ – ಮೀನ
ಋತು – ಶಿಶಿರ
ಸೂರ್ಯೋದಯ 06:24:11
ಸೂರ್ಯಾಸ್ತ 18:29:21
ಹಗಲಿನ ಅವಧಿ 12:05:10
ರಾತ್ರಿಯ ಅವಧಿ 11:54:10
ಚಂದ್ರಾಸ್ತ 10:55:13
ಚಂದ್ರೋದಯ 24:20:43*
ರಾಹು ಕಾಲ 10:56 – 12:27ಅಶುಭ
ಯಮಘಂಡ ಕಾಲ 15:28 – 16:59 ಅಶುಭ
ಗುಳಿಕ ಕಾಲ 07:55 – 09:25
ಅಭಿಜಿತ್ 12:03 – 12:51 ಶುಭ
ದುರ್ಮುಹೂರ್ತ 08:49 – 09:38 ಅಶುಭ
ದುರ್ಮುಹೂರ್ತ 12:51 – 13:39 ಅಶುಭ
—
ಇಂದಿನ ಮಾತು
ಒಳ್ಳೆಯ ನಿರ್ಧಾರ ನಮ್ಮನ್ನು ಅರ್ಧ ಗೆಲ್ಲಿಸಿದರೆ, ಪ್ರಯತ್ನ ಮತ್ತು ಪರಿಶ್ರಮಗಳು ಇನ್ನರ್ಧ ಗೆಲ್ಲಿಸುತ್ತವೆ.
—
ಇಂದಿನ ಸುಭಾಷಿತ
ಯಯೋರೇವ ಸಮಂ ವಿತ್ತಂ
ಯಯೋರೇವ ಸಮಂ ಶ್ರುತಂ |
ತಯೋರ್ವಿವಾಹಃ ಸಖ್ಯಂ ಚ
ನ ತು ಪುಷ್ಟವಿಪುಷ್ಟಯೋಃ ||
(ಮಹಾಭಾರತ)
ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅವರ ನಡುವೆ ಮಾತ್ರ ಮದುವೆಯೂ ಸ್ನೇಹವೂ ಪ್ರಶಸ್ತ. ಹೆಚ್ಚು ಕಡಿಮೆ ಇರತಕ್ಕವರಲ್ಲಿ ಪ್ರಶಸ್ತವಲ್ಲ.
—
ಇಂದಿನ ಪದಾರ್ಥ
ಅಗ್ನಿಫಲ = A diamond
ಅಗ್ನಿವೀರ್ಯ = Rudra
—
ಇಂದಿನ ಓದು
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7
62) ಪವಿತ್ರಂ
ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು “ಪವಿತ್ರ”. ಆದರೆ ಈ ಬೌದ್ಧಿಕ ಶರೀರ ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು ಅನೇಕ ! ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ. ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪವಿತ್ರವಾದ ಮೋಕ್ಷವನ್ನು ಕರುಣಿಸುವ ಭಗವಂತ “ಪವಿತ್ರಂ”
—
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7
63) ಮಙ್ಗಲಂ (ಮಂಗಲಂ) ಪರಮ್
ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಸಾಮಾನ್ಯವಾಗಿ ಮದುವೆಗೆ ಕಲ್ಯಾಣ ಎನ್ನುತ್ತಾರೆ. ಮದುವೆಯ ನಂತರ ಧರಿಸುವ ತಾಳಿಯನ್ನು “ಮಂಗಳ ಸೂತ್ರ” ಎನ್ನುತ್ತಾರೆ. ಆದರೆ ಎಲ್ಲಾ ಮದುವೆಯು ಮಂಗಲವಲ್ಲ! ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ ಅಂತಹ ಮದುವೆ ಮಾತ್ರ ಕಲ್ಯಾಣ. ನಮ್ಮನ್ನು ಅಧಃಪತನಕ್ಕೆ ಒಯ್ಯುವ ಮಧುವೆ ಅಮಂಗಲ. ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವ ಇಹಕರ್ಮ ಮಂಗಲ. (ಪಾಂಡವರು ಮಾಡಿದ ಕರ್ಮ); ತನ್ನ ಸ್ವಾರ್ಥಕ್ಕಾಗಿ ಮಾಡುವ ಪರಕರ್ಮ ಅಮಂಗಲ. ಕೇವಲ ಮೇಲಕ್ಕೇರುವುದು ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ – ಅದೇ ಮೋಕ್ಷ. ಆದ್ದರಿಂದ ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
***