newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ಅಷ್ಟಮಿ
07-03-2025, ಶುಕ್ರವಾರ
# ದುರ್ಗಾಷ್ಟಮಿ
# ಶೃಂಗೇರಿ ಶ್ರೀ ದುರ್ಗಾಂಬಾ ರಥೋತ್ಸವ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 07/03/2025
ತಿಂಗಳು – ಮಾರ್ಚ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ಅಷ್ಟಮಿ 09:18:06
ಪಕ್ಷ – ಶುಕ್ಲ
ನಕ್ಷತ್ರ – ಮೃಗಶಿರ 23:30:59
ಯೋಗ – ಪ್ರೀತಿ 18:13:24
ಕರಣ – ಭವ 09:18:06
ಕರಣ – ಬಾಳವ 20:43:09
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ವೃಷಭ till 11:44:05
ಚಂದ್ರ ರಾಶಿ – ಮಿಥುನ from 11:44:05
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ – 06:33:07
ಸೂರ್ಯಾಸ್ತ – 18:28:09
ಹಗಲಿನ ಅವಧಿ – 11:55:02
ರಾತ್ರಿಯ ಅವಧಿ – 12:04:21
ಚಂದ್ರೋದಯ – 12:25:14
ಚಂದ್ರಾಸ್ತ – 25:55:29*
ರಾಹು ಕಾಲ – 10:30- 12:00 — 11:01 – 12:31 ಅಶುಭ
ಯಮಘಂಡ ಕಾಲ – 15:29 – 16:59 ಅಶುಭ
ಗುಳಿಕ ಕಾಲ – 08:03 – 09:32
ಅಭಿಜಿತ್ – 12:07 – 12:54 ಶುಭ
ದುರ್ಮುಹೂರ್ತ – 08:56 – 09:44 ಅಶುಭ
ದುರ್ಮುಹೂರ್ತ – 12:54 – 13:42 ಅಶುಭ
—
ಇಂದಿನ ಮಾತು
ಪ್ರತಿಭೆ ಮತ್ತು ರೂಪ ದೇವರ ಕೊಡುಗೆ,
ಕೀರ್ತಿ ಮತ್ತು ಹಣ ಮನುಷ್ಯನ ಗಳಿಕೆ,
ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿಕೊಂಡದ್ದು. ಆಲೋಚಿಸಿ.
—
MATURITY is learning to walk away from people and situations that threaten your peace of mind, self respect, values, morals or self worth.
—
ಇಂದಿನ ಸುಭಾಷಿತ
ನೈತತ್ ಸಮಾಚರೇಜ್ಜಾತು
ಮನಸಾಪಿ ಹ್ಯನೀಶ್ವರಃ |
ವಿನಶ್ಯತ್ಯಾಚರನ್ ಮೌಢ್ಯಾದ್
ಯಥಾ ರುದ್ರೋಽಬ್ಧಿಜಂ ವಿಷಮ್ ||
(ಭಾಗವತ)
ಸಮರ್ಥನಲ್ಲದವನು ಒಂದು ಸಲವಾದರೂ ಮನಸ್ಸಿನಿಂದಲಾದರೂ ಲೋಕ ಬಾಹ್ಯವಾದದ್ದನ್ನು ಆಚರಿಸಬಾರದು. ಈಶ್ವರನು ಸಮುದ್ರಮಥನದಿಂದ ಹುಟ್ಟಿದ ವಿಷವನ್ನು ಕುಡಿದನೆಂದು ಇನ್ನೊಬ್ಬನೂ ಮೌಢ್ಯದಿಂದ ಕುಡಿದರೆ ಸಾಯುತ್ತಾನೆ.
—
ಇಂದಿನ ಪದಾರ್ಥ
ಅಗ್ನಿಫಲ = A diamond
ಅಗ್ನಿವೀರ್ಯ = Rudra
—
ಇಂದಿನ ಓದು
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||
41) ಮಹಾಸ್ವನಃ
ಮಹಾ ಎಂದರೆ ಮಹತ್ತಾದ, ಸ್ವನ ಎಂದರೆ ನಾದ. ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ. ಮಹಾ+ಅಸು+ಅನ=ಮಹಾಸ್ವನ. ಇಲ್ಲಿ ಅಸು ಎಂದರೆ ‘ಇಂದ್ರಿಯ’, ಮಹಾಅಸು ಎಂದರೆ ‘ಅತ್ಯಂತ ಮುಖ್ಯ ಇಂದ್ರಿಯ. ಅನ ಎಂದರೆ ‘ಚಲನೆ’. ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು(ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ. ಅದ್ದರಿಂದ ಅಸುಗಳಲ್ಲಿ ಮಹಾ ಅಸು ಉಸಿರು(ಮುಖ್ಯಪ್ರಾಣ). ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟ ಭಗವಂತ ಮಹಾಸ್ವನಃ.
42) ಅನಾದಿನಿಧನಃ
ಭಗವಂತನಿಗೆ ಆದಿ- ಅಂತ, ಹುಟ್ಟು- ಸಾವು ಎನ್ನುವುದಿಲ್ಲ. ಪ್ರಾಣ(ಅನ)ನಲ್ಲಿ ಇದ್ದು, ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ ಭಗವಂತ ಅನಾದಿನಿಧನಃ