newsics.com
ಮಂಡ್ಯ: ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಭಾಷೆಗಳ ಅನೇಕ ಮೇರು ನಟರು ಕುಣಿದು ಕುಪ್ಪಳಿಸಿದ್ದ ಪ್ರಸಿದ್ದ KRS ಬೃಂದಾವನಕ್ಕೆ ಆಧುನಿಕ ಟಚ್ ನೀಡಲಾಗ್ತಿದೆ. ಈ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾವೇರಿ ಅಮ್ಯೂಸ್ಮೆಂಟ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಿನ್ನೆಲೆ, 1911 ರಲ್ಲಿ KRS ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಹಲವಾರು ಏಳು-ಬೀಳುಗಳ ನಡುವೆ 1932ರ ಹೊತ್ತಿಗೆ ಡ್ಯಾಂ ಕಟ್ಟುವ ಕೆಲಸ ಮುಕ್ತಾಯವಾಗಿತ್ತು. ಈ ವೇಳೆ ಡ್ಯಾಂನ ಸೌಂದರ್ಯ ಹೆಚ್ಚಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಂದು ಡ್ಯಾಂನ ಸಮೀಪ 60 ಎಕರೆ ಪ್ರದೇಶದಲ್ಲಿ ಬೃಂದಾವನವನ್ನ ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲದೆ ಬೃಂದಾವನದಲ್ಲಿ ಅಂದಿನ ದಿನಮಾನಸದಲ್ಲೇ ಹಾಡಿಗೆ ತಕ್ಕಂತೆ ನೃತ್ಯ ಸಂಯೋಜನೆಯ ಕಾರಂಜಿಯನ್ನ ಕೂಡ ನಿರ್ಮಿಸಲಾಗಿತ್ತು. ಹೀಗಾಗಿ ಇಂದಿಗೂ ನೃತ್ಯ ಕಾರಂಜಿ ವೀಕ್ಷಣೆಗೆ ಸಾವಿರಾರು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರ್ತಿದೆ.
ಇಷ್ಟೆಲ್ಲಾ ಇತಿಹಾಸವನ್ನ ಹೊಂದಿರುವ ಈ ಬೃಂದಾವನ ಸದ್ಯದಲ್ಲೇ ಎಲ್ಲರಿಂದ ಕಣ್ಮರೆಯಾಗಲಿದೆ. ಈಗಾಗಲೇ ಈ ಪ್ಲಾನ್ಗೆ ಡಿಪಿಆರ್ ಕೂಡ ಸಿದ್ದಪಡಿಸಲಾಗಿದೆ.