newsics.com
ಬೆಂಗಳೂರು: ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರ ಅಭಿಯಾನ ಆರಂಭಿಸಿದ್ದು, ಇದರ ಮೊದಲ ಭಾಗವಾಗಿ ಬೆಂಗಳೂರಿನಲ್ಲಿ 500 ಹದಿಹರೆಯದ ಹುಡುಗಿಯರಿಗೆ ಉಚಿತವಾಗಿ ಎಚ್ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ನೀಡಲಾಯಿತು.
ಇದೇ ವೇಳೆ ಹೈದರಾಬಾದ್ನಲ್ಲೂ ಇದೇ ರೀತಿಯ ಅಭಿಯಾನ ಆರಂಭಿಸಲಾಗಿದೆ.
ಲೈಂಗಿಕವಾಗಿ ಹರಡುವ ಸೋಂಕು ಎನಿಸಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಾಗತಿಕವಾಗಿ ಹೋರಾಡಲಾಗುತ್ತಿದೆ.
ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಭಾರತ ಕೂಡ ಕ್ರಮ ವಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಹುಡುಗಿಯರಿಗೆ ಬೆಂಗಳೂರಲ್ಲಿ ಬುಧವಾರ ಉಚಿತ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು. ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ಒದಗಿಸಲು ಜೀವಿಕಾ ಫೌಂಡೇಶನ್ನೊಂದಿಗೆ ಕೈಜೋಡಿಸಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸುಮಾರು 500 ಹದಿಹರೆಯದ ಹುಡುಗಿಯರಿಗೆ ಬುಧವಾರ ಬೆಂಗಳೂರಿನಲ್ಲಿ ಮೊದಲ ಡೋಸ್ ನೀಡಲಾಯಿತು.
ಗರ್ಭಕಂಠದ ಕ್ಯಾನ್ಸರ್ ಅನ್ನು ಎದುರಿಸಲು ಮತ್ತು ಮಹಿಳೆಯರ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುವ ಒಂದು ಒಂದು ಮಹತ್ವದ ಕ್ರಮವಾಗಿದೆ.