newsics.com
ಹೈದರಾಬಾದ್: ಅಣ್ಣನ ಹೆಂಡತಿಯ ಮೇಲೆ ಕಣ್ಣಿಟ್ಟಿದ್ದ ಕಿರಿಯ ಸಹೋದರ ಅವಳು ಒಪ್ಪದಿದ್ದಾಗ ಬರ್ಬರವಾಗಿ ಕೊಂದು ಶವದ ಜತೆ ತನ್ನ ಆಸೆ ಪೂರೈಸಿಕೊಂಡ ಅಮಾನವೀಯ ಘಟನೆ ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಶ್ರೀಕಾಂತ್ ಬಿಸ್ವಾಸ್ ಪೋಷಕರು ಮತ್ತು ಕಿರಿಯ ಸಹೋದರ ವಾರಿಶಿಯಾ ನಯಾ ಬಿಸ್ವಾಸ್ ಜತೆ ಪತ್ನಿ ಅರ್ಪಿತಾ ಬಿಸ್ವಾಸ್ (25) ಹಾಗೂ ಇಬ್ಬರು ಮಕ್ಕಳು ಜತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ.
ಹೊಸ ವರ್ಷಾಚರಣೆಯಂದು ಶ್ರೀಕಾಂತ್ ಬಿಸ್ವಾಸ್ ಅವರ ಪೋಷಕರು ತಿರುಮಲಕ್ಕೆ ಹೋಗಿದ್ದರು. ಅಂದು ರಾತ್ರಿ ಮನೆಯಲ್ಲಿ ಎಲ್ಲರೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಬಿಸ್ವಾಸ್ ಕಂಠಪೂರ್ತಿ ಮದ್ಯ ಸೇವಿಸಿ ಗಡದ್ದಾಗಿ ಮಲಗಿದ್ದ. ಎಲ್ಲರೂ ಮಲಗಿದ ನಂತರ ನಯಾ ಬಿಸ್ವಾಸ್ ಅತ್ತಿಗೆ ಅರ್ಪಿತಾ ಕೋಣೆಗೆ ಹೋಗಿದ್ದ. ಈ ವೇಳೆ ತನ್ನ ಆಸೆಯನ್ನು ಆಕೆಯ ಮುಂದಿಟ್ಟಿದ್ದ.
ಆಕೆ ಒಪ್ಪದಿದ್ದಾಗ ಸಿಟ್ಟಿನಿಂದ ವಿವೇಚನೆ ಕಳೆದುಕೊಂಡು ಕಬ್ಬಿಣದ ರಾಡ್ನಿಂದ ಅರ್ಪಿತಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅರ್ಪಿತಾ ಬಿಸ್ವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆದರೂ ಕರುಣೆ ತೋರದ ನಯಾ ಬಿಸ್ವಾಸ್ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಸೆ ತೀರಿಸಿಕೊಂಡ ಬಳಿಕ ಮೃತದೇಹವನ್ನು ಮನೆಯಿಂದ ನೂರು ಮೀಟರ್ ದೂರದಲ್ಲಿ ಎಸೆದಿದ್ದ.
ಶ್ರೀಕಾಂತ್ ಬಿಸ್ವಾಸ್ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಕಾಣಲಿಲ್ಲ. ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಆಕೆಯ ಮಲಗುವ ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಇದರಿಂದ ಆತಂಕಗೊಂಡ ಪತಿ ಕಾಲೊನಿ ನಿವಾಸಿಗಳಿಗೆ ವಿಷಯ ತಿಳಿಸಿದ. ಬಳಿಕ ಎಲ್ಲರೂ ಅರ್ಪಿತಾಗಾಗಿ ಹುಡುಕಾಟ ನಡೆಸಿದ್ದಾರೆ.
ಆಕೆಯ ರಕ್ತಸಿಕ್ತ ಶವ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ ನಯಾ ಬಿಸ್ವಾಸ್ ಮೇಲೆ ಎಲ್ಲರಿಗೂ ಅನುಮಾನವಿತ್ತು. ನಯಾ ಬಿಸ್ವಾಸ್ ತನ್ನ ಆಸೆಯನ್ನು ಪೂರೈಸುವಂತೆ ಅತ್ತಿಗೆಯನ್ನು ವರ್ಷಗಳಿಂದ ಬೆನ್ನತ್ತಿದ್ದ. ಈ ಬಗ್ಗೆ ಮನೆಯಲ್ಲೂ ಎಚ್ಚರಿಕೆ ನೀಡಿದ್ದರು. ಆದರೂ ಮನಸ್ಸು ಬದಲಾಯಿಸದ ಆರೋಪಿ ಕೊನೆಗೂ ಆಕೆಯನ್ನು ಕೊಂದು ತನ್ನ ಆಸೆ ಈಡೇರಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Inter course in Winter ಬೆಳಗ್ಗೆ ದೈಹಿಕ ಸಂಪರ್ಕ ಮಾಡೋದ್ರಿಂದ ಹತ್ತಾರು ಪ್ರಯೋಜನ…
Vande Bharat sleeper coach ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸಿದ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು