newsics.com
ತಿರುವನಂತಪುರಂ: ದೇಗುಲಗಳಲ್ಲಿ ದರ್ಶನ ವೇಳೆ ಪುರುಷರು ಮೇಲಂಗಿ (ಶರ್ಟ್-ಬನಿಯನ್) ಕಳಚುವ ದೀರ್ಘಕಾಲದ ಪದ್ಧತಿಗೆ ಕೇರಳದ ದೇವಸ್ವಂ ಮಂಡಳಿಗಳು ಇತಿಶ್ರೀ ಹಾಡಲು ಚಿಂತಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮೇಲಂಗಿ ತೆಗೆಯುವ ಸಂಪ್ರದಾಯ ಸಾಮಾಜಿಕ ಅನಿಷ್ಟವಾಗಿದ್ದು, ಇದನ್ನು ರದ್ದುಮಾಡಬೇಕು ಎಂದು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸ್ಥಾಪಿತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆ ಬೆನ್ನಲ್ಲೇ ಪಿಣರಾಯಿ ವಿಜಯನ್ ಈ ಮಾಹಿತಿ ನೀಡಿದ್ದಾರೆ.

ದೇವಸ್ವಂ ಮಂಡಳಿ ಸದಸ್ಯರು ನನ್ನನ್ನು ಭೇಟಿಯಾಗಿದ್ದು, ಮೇಲಂಗಿ ತೆಗೆಯುವ ಆಚರಣೆಯ ಕುರಿತು ನಿರ್ಧರಿಸುವುದಾಗಿ ತಿಳಿಸಿದರು. ಇದು ಉತ್ತಮವಾದ ವಿಚಾರವೆಂದು ತಿಳಿಸಿದ್ದೇನೆ. ಆದರೆ ಯಾವ ದೇವಸ್ವಂ ಮಂಡಳಿ ಈ ನಿರ್ಧಾರ ಜಾರಿ ಮಾಡುತ್ತದೆ ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ” ಎಂದು ಪಿಣರಾಯಿ ಹೇಳಿದರು.
ಕೇರಳದಲ್ಲಿ ಗುರುವಾಯೂರು, ತಿರುವಾಂಕೂರ್, ಮಲಬಾರ್, ಕೊಚ್ಚಿನ್ ಮತ್ತು ಕೂಡಲ್ಮನಿಕ್ಯಂ ಎಂಬ ಐದು ದೇವಸ್ವಂ ಮಂಡಳಿಗಳಿದ್ದು, ಇವು ಒಟ್ಟಾಗಿ 3,000 ದೇಗುಲಗಳನ್ನು ನಿರ್ವಹಣೆ ಮಾಡುತ್ತಿವೆ.
ಸಚ್ಚಿದಾನಂದ ಸ್ವಾಮಿಗಳು ಮೇಲಂಗಿ ಪದ್ಧತಿಯನ್ನು ತೆಗದುಹಾಕಲು ಕರೆ ನೀಡಿದ್ದು, ಅವರ ಮಾತನ್ನು ನಾನು ಅನುಮೋದಿಸಿದ್ದೇನೆ. ಈ ಕುರಿತು ಅಂತಿಮ ನಿರ್ಧಾರವನ್ನು ದೇವಸ್ವಂ ಮಂಡಳಿಗಳು ಕೈಗೊಳ್ಳಬೇಕಿದ್ದು, ಸರ್ಕಾರ ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಪಿಣರಾಯಿ ಸ್ಪಷ್ಟಪಡಿಸಿದ್ದಾರೆ.
Religious Tips ಇನ್ಮುಂದೆ ಹಳೆ ಬಟ್ಟೆ ಬಿಸಾಕಬೇಡಿ; ಈ ರೀತಿ ಮಾಡಿ ಸಾಕು…
Chinmay Das ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್
Bus caught fire ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಲೀಪರ್ ಕೋಚ್ ಬಸ್: 30 ಪ್ರಯಾಣಿಕರು ಪಾರು