newsics.com
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಂಡು ಓಡಾಡ್ತಾ ಕೋಟಿ, ಕೋಟಿ ವಂಚಿಸಿರೋ ಈ ಲೇಡಿ ಪೊಲೀಸರ ಅತಿಥಿಯಾಗಿದ್ದಾರೆ.
ನಾನು ಶ್ವೇತಾಗೌಡ, ಸಮಾಜ ಸೇವಕಿ, ನಾನು ವರ್ತೂರ್ ಪ್ರಕಾಶ್ ಆಪ್ತೆ. ಸಮಾಜ ಸೇವಕಿ ಅಂತ ಹೇಳ್ಕೊಳ್ತಿದ್ದ ಬಾಗಲಗುಂಟೆ ನಿವಾಸಿ ಶ್ವೇತಾಗೆ ಕೆಲ ದಿನಗಳ ಹಿಂದೆಯಷ್ಟೇ ಅವೆನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಸುಮಾರು 2.42 ಕೋಟಿ ರೂ ಮೌಲ್ಯದ ಆಭರಣವನ್ನು ಖರೀದಿಸಿದ್ದರು. ಹಣ ಕೇಳಿದ್ದಕ್ಕೆ ಚಿನ್ನದ ವ್ಯಾಪಾರಿಗೆ ಧಮ್ಕಿ ಹಾಕಿದ್ದರಂತೆ. ಬಳಿಕ ನಗರದ ಡಾಲರ್ಸ್ ಕಾಲೋನಿಯಲ್ಲಿರೋ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆ ಅಡ್ರೆಸ್ ಕೊಟ್ಟಿದ್ದರು.
ಚಿನ್ನದ ಬಿಲ್ ಹಣ ಸಿಗದಿದ್ದಾಗ ಅಂಗಡಿ ಮಾಲೀಕ ಸಂಜಯ್ ಭಾಷ್ನ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಎಸಿಪಿ ಗೀತಾ ಆರೋಪಿ ಹಿಂದೆ ಬೀಳ್ತಿದ್ದಂತೆ, ಟೆಂಟ್ ಎತ್ತಿದ ಶ್ವೇತಾಗೌಡ ಮೈಸೂರಿಗೆ ಎಸ್ಕೇಪ್ ಆಗಿದ್ದಾರೆ. ನಂತ್ರ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನ, ಕಾರು ಸೇರಿದಂತೆ ಆಕೆಗೆ ಸಂಬಂಧಿಸಿದ ವಸ್ತುಗಳು ಜಪ್ತಿ ಮಾಡಿದ್ದಾರೆ.
ನಾನು ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಳ್ತಿದ್ದ ಶ್ವೇತ ಯಾರನ್ನೋದು ಅಸಲಿಗೆ ವರ್ತೂರ್ ಪ್ರಕಾಶ್ಗೆ ಗೊತ್ತೇ ಇಲ್ಲವಂತೆ. ಈ ಬಗ್ಗೆ ಖುದ್ದು ಮಾಜಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.