newsics.com
ಮಂಗಳೂರು: ಇಲ್ಲೊಬ್ಬ ಬಾಲಕನಿಗೆ 17 ವರ್ಷಗಳಿಂದ ಮಾತನಾಡಲು ಬರ್ತಿರಲಿಲ್ಲ. ಆದ್ರೆ ಪವಾಡ ಎಂಬಂತೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿದ ಬಳಿಕ ಮಾತು ಶುರುಮಾಡಿದ್ದಾನೆ. ಇದಕ್ಕೆ ಕಾರಣ ಕೋಟಿ ಕೋಟಿ ಭಕ್ತರ ಪಾಲಿನ ಆರಾಧ್ಯ ದೈವ ಅಯ್ಯಪ್ಪ ಸ್ವಾಮಿಯೇ ಅಂತ ಭಕ್ತರು ನಂಬಿದ್ದಾರೆ.
ಈ ಬಾಲಕನ ಹೆಸರು ಪ್ರಸನ್ನ. ವಯಸ್ಸು 17. ಮಂಗಳೂರಿನ ಪುತ್ತೂರಿನ ಸಾಮೆತ್ತಡ್ಕ ನಿವಾಸಿ. ಒಂದು ವರ್ಷದ ಹಿಂದೆ ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದ. ಈ ಬಾರಿ ಮತ್ತೆ ಶಬರಿಮಲೆಗೆ ಹೋಗಲು ಮಾಲೆ ಧರಿಸಿದ್ದ. ಆದ್ರೆ ಅದಕ್ಕೂ ಮೊದಲೇ ಪವಾಡವೆಂಬಂತೆ ಬಾಲಕ ಮಾತನಾಡಲು ಶುರುಮಾಡಿದ್ದಾನೆ. 17 ವರ್ಷಗಳ ಕಾಲ ಮಾತನಾಡದ ಪ್ರಸನ್ನ ಶಬರಿಮಲೆಗೆ ಹೋಗಿ ಬಂದ ಬಾಳಿಕ ಮಾತನಾಡಲು ಆರಂಭಿಸಿದ್ದು ಭಕ್ತರನ್ನು ಅಚ್ಚರಿಗೊಳಿಸಿದ್ದು ಮಾತ್ರವಲ್ಲದೇ ಅವರ ಭಕ್ತಿಯನ್ನು ಇಮ್ಮಡಿಗೊಳಿಸಿದೆ.
ಪುತ್ತೂರು ಮಹಾಲಿಂಗೇಶ್ವರ ITIನಲ್ಲಿ ಪ್ರಸನ್ನ 2ನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿದ್ದಾನೆ. ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದದಲ್ಲಿ ಪ್ರಸನ್ನ ಮಾಲೆ ಧರಿಸಿದ್ದ. 48 ದಿನಗಳ ಕಾಲ ಕಠಿಣ ವೃತಾಚರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದ. ಆ ಬಳಿಕ ಮಾತು ಆರಂಭಿಸಿದ್ದು ಅಯ್ಯಪ್ಪ ಸ್ವಾಮಿ ಶರಣು ಅಂತ ಹೇಳೋಕೆ ಶುರು ಮಾಡಿದ್ದಾನೆ. ಈ ಬಾರಿಯೂ ಮಲೆ ಏರಿದ್ರೆ ಇನ್ನಷ್ಟು ಸ್ಪಷ್ಟ ಮಾತಾಡುವ ವಿಶ್ವಾಸವಿದೆ.