newsics.com
ಚಿತ್ರದುರ್ಗ: ಅಳಿಯನನ್ನು ಮನೆ ಬಾಗಿಲಿಗೆ ಕರೆಸಿ ಬರ್ಬರವಾಗಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮಂಜುನಾಥ್ ಚಿತ್ರದುರ್ಗದ ಕೋಣನೂರು ಗ್ರಾಮದವರು.. ಪಕ್ಕದ ಮನೆ ಹುಡುಗಿಯನ್ನು ಪ್ರೀತಿಸಿ 3 ತಿಂಗಳ ಹಿಂದಷ್ಟೇ ಮಂಜುನಾಥ್ ಮತ್ತು ಯುವತಿ ಓಡಿ ಹೋಗಿ ಮದುವೆಯಾಗಿದ್ದರು. ಮಂಜುನಾಥ್ ವಯಸ್ಸು ಜಾಸ್ತಿ ಎಂದು ಯುವತಿ ಪೋಷಕರು ಅಡ್ಡಿ ಮಾಡಿದ್ರು. ಬಳಿಕ ಯುವತಿ ಮಿಸ್ಸಿಂಗ್ ಎಂದು ಮನೆಯವರು ಕಂಪ್ಲೆಂಟ್ ಕೂಡ ಕೊಟ್ಟಿದ್ರು.
ಅಕ್ಟೋಬರ್ 9ಕ್ಕೆ ಭರಮಸಾಗರ ಠಾಣೆಗೆ ಮಂಜುನಾಥ್ ಮತ್ತು ಯುವತಿಯನ್ನು ಕರೆಸಲಾಗಿತ್ತು. ಬಳಿಕ DYSP ನೇತೃತ್ವದಲ್ಲಿ ಎರಡೂ ಕುಟುಂಬಸ್ಥರ ರಾಜಿ ಸಂಧಾನ ಕೂಡ ಮಾಡಲಾಗಿತ್ತು.
ಒಂದೇ ಜಾತಿಯಾಗಿದ್ದರೂ, ವಯಸ್ಸಿನ ಅಂತರ ಹಿನ್ನೆಲೆ, ಯುವತಿಯ ಮನೆಯವರಿಗೆ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಬರ್ಬರವಾಗಿ ಮಂಜುನಾಥ್ನನ್ನು ಹತ್ಯೆಗೈದಿದ್ದಾರೆ.
ಮಂಜುನಾಥ್ ತಂದೆ, ತಾಯಿ ಮೇಲೂ ಹಲ್ಲೆ ಮಾಡಿದ್ದು, ಕೈ ಕಾಲು ಮುರಿದಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಯಸ್ಸು ಮೀರಿದ ಪ್ರೀತಿ ಓರ್ವನ ಸಾವಿಗೆ ಕಾರಣವಾಗಿದೆ. ಹೆತ್ತವರ ದುಡುಕಿನ ನಿರ್ಧಾರ ಮಗಳ ಕುಂಕುಮವನ್ನೇ ಅಳಿಸಿಬಿಟ್ಟಿದೆ.
Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್ನಲ್ಲಿ ಬಟ್ಟೆಯೇ ಅಲರ್ಜಿ!