newsics.com
ದೆಹಲಿ : ಪತಿ ತನ್ನ ಕೆಲಸ ಬಿಟ್ಟು ತನ್ನ ಇಚ್ಛೆಯಂತೆ ಬದುಕುವಂತೆ ಪತ್ನಿಯನ್ನು ಒತ್ತಾಯಿಸುವುದು ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ (33) ವಿಚ್ಛೇದನಕ್ಕಾಗಿ ಅರ್ಜಿಯನ್ನು ಹಾಕಿದ್ದರು.
ಇನ್ನು ಆಕೆಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ್ದು, ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಕೆಲಸ ಬಿಟ್ಟು ಭೋಪಾಲ್ನ ಕ್ಯಾಂಪುರಾಮ್ಗೆ ಸೇರುವಂತೆ ಪತಿ ತನಗೆ ಭಾವನಾತ್ಮಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆಕೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಪತಿಯಾಗಲಿ, ಪತ್ನಿಯಾಗಲಿ ಇನ್ನೊಬ್ಬರಿಗೆ ಕೆಲಸ ಬಿಡುವಂತೆ ಒತ್ತಡ ಹೇರಬಾರದು. ಕೆಲಸ ಬಿಡುವಂತೆ ಪತ್ನಿಗೆ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ ಎಂದು ಸ್ಪಷ್ಟಪಡಿಸಿದೆ.