newsics.com
ಬೆಂಗಳೂರು : ಬೆಂಗಳೂರಿನಿಂದ ಆಘಾತಕಾರಿ ಅಂಕಿ ಅಂಶವೊಂದು ಹೊರಬಂದಿದ್ದು ಇಲ್ಲಿ ಮೂರನೇ ಒಂದು ಭಾಗದಷ್ಟು ಸಾವುಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಅಧ್ಯಯನ ಹೇಳಿದೆ.
ನಗರಗಳಲ್ಲಿ ವಾಸಿಸುವ ಜನರ ಜೀವಿತಾವಧಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಅದಲ್ಲದೆ ವಿಷಕಾರಿ ಗಾಳಿಯಿಂದಾಗಿ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ವಾಸಿಸುವ ಹೆಚ್ಚಿನ ಜನ ತಮ್ಮ ದಿನವನ್ನು ಬೆಳಿಗ್ಗೆ ವಾಕಿಂಗ್ ಅಥವಾ ಜಿಮ್ ನೊಂದಿಗೆ ಪ್ರಾರಂಭಿಸುತ್ತಾರೆ ಜೊತೆಗೆ ಡಯಟ್ ಆಹಾರವನ್ನು ಸೇವನೆ ಮಾಡುತ್ತಾರೆ. ಆದರೆ ಇದೆಲ್ಲದರ ಹೊರತಾಗಿಯೂ, ಅವರು ದಿನನಿತ್ಯ ಮಾಲಿನ್ಯದಿಂದ ತುಂಬಿದ ಗಾಳಿಯನ್ನು ಉಸಿರಾಡುತ್ತಾರೆ, ಇದು ನಿಧಾನವಾಗಿ ಅವರ ಶ್ವಾಸಕೋಶವನ್ನು ಹಾಳುಮಾಡುತ್ತಿದೆ. ಇಲ್ಲಿನ 35 ಪ್ರತಿಶತಕ್ಕೂ ಹೆಚ್ಚು ಜನರು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ.
ಹೃದಯಾಘಾತ ಮತ್ತು ಕ್ಯಾನ್ಸರ್ ನಂತರ, ಶ್ವಾಸಕೋಶದ ಕಾಯಿಲೆ ಅಂದರೆ ಸಿಒಪಿಡಿ (COPD) ಸಮಸ್ಯೆಯೂ ದೇಶದಲ್ಲಿ ಹೆಚ್ಚಾಗುತ್ತಿದ್ದು, ಜನರ ಸಾವಿಗೆ ಕಾರಣವಾಗುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ವಾಸಿಸುವ ಪ್ರತಿ ನೂರು ಜನರಲ್ಲಿ 30 ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಸಿಒಪಿಡಿ ಲಕ್ಷಣಗಳು;
– ನಿರಂತರ ಕೆಮ್ಮು
– ಕೆಮ್ಮಿನೊಂದಿಗೆ ಲೋಳೆ ಬರುವುದು
-ಕಡಿಮೆ ಉಸಿರಾಡುವಿಕೆ
– ಎದೆಯಲ್ಲಿ ಉಬ್ಬಸದ ಅನುಭವ
– ಚರ್ಮದಲ್ಲಿ ಜಜ್ಜಿದ ಗಾಯ
– ವಿಪರೀತ ದಣಿದ ಅನುಭವ
– ಆಗಾಗ ಶ್ವಾಸಕೋಶದ ಸೋಂಕುಗಳು
– ತ್ವರಿತ ತೂಕ ನಷ್ಟ
ಸಿಒಪಿಡಿಗೆ ಕಾರಣಗಳೇನು?
– ವಾಯುಮಾಲಿನ್ಯ
– ಧೂಮಪಾನ
– ತಂಬಾಕು ಸೇವನೆ
– ಹೊಗೆ ಅಥವಾ ರಾಸಾಯನಿಕ ಕಾರ್ಖಾನೆಯಲ್ಲಿ ಕೆಲಸ ಮಾಡುವುದು