newsics.com
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ಪೈಕಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇದಕ್ಕೂ ಮೊದಲೇ ಬಿಗ್ ಬಾಸ್ ತೊರೆಯುವ ನಿರ್ಧಾರಕ್ಕೆ ಲಾಯರ್ ಜಗದೀಶ್ ಬಂದಿದ್ದಾರೆ.
ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ವಿಭಾಗ ಮಾಡಲಾಗಿದೆ. ಏಳು ಜನರು ನರಕದಲ್ಲಿ ಇದ್ದರೆ, 10 ಜನರು ಸ್ವರ್ಗದಲ್ಲಿ ಇದ್ದಾರೆ. ಸ್ವರ್ಗವನ್ನು ಸ್ವಚ್ಛ ಮಾಡುವ ಕೆಲಸ ನರಕವಾಸಿಗಳು ಮಾಡಬೇಕು. ಇದನ್ನು ಜಗದೀಶ್ ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
‘ಮಾನವೀಯತೆ ಮುಖ್ಯ. ಮಾನವೀಯತೆ ಇಲ್ಲದೆ ಹೋದಲ್ಲಿ ನಾನು ಇಲ್ಲಿ ಇರೋದಿಲ್ಲ. ಐಸ್ ಟಾಸ್ಕ್ ಆಡಿ ಬಂದ ಬಳಿಕ ಅವರ ಬಳಿ ಕೆಲಸ ಮಾಡಿಸಬೇಕು ಎಂದರೆ ಎಷ್ಟು ಸರಿ? ಅವರಿಗೆ ಸರಿಯಾದ ಊಟ ಇಲ್ಲದೆ ಶಕ್ತಿ ಬೇರೆ ಇಲ್ಲ. ಹೀಗಾಗಿ ನಾನೇ ಪಾತ್ರೆ ತೊಳೆದೆ. ತಪ್ಪಾ? ನಾನು ಈಗಲೇ ಬಿಗ್ ಬಾಸ್ ನಿಂದ ಹೊರಕ್ಕೆ ಹೋಗೋಕೂ ರೆಡಿ’ ಎಂದಿದ್ದಾರೆ ಅವರು.