newsics.com
ಸಿನಿಮಾ ರಂಗದ ಘಟಾನುಘಟಿಗಳಿಗೆ ಜ್ಯೋತಿಷ್ಯ ನುಡಿಯುತ್ತಿದ್ದ ವೇಣುಸ್ವಾಮಿ ತಮ್ಮ ಪತ್ನಿ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಹೈದರಾಬಾದ್ನಲ್ಲಿ ಭಾರೀ ಸಂಚಲನ ಮೂಡಿಸಿದೆ. ವೇಣುಸ್ವಾಮಿ ಹಾಗೂ ಅವರ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವೇಣುಸ್ವಾಮಿ ಹಾಗೂ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಜತೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ. ವೀಣಾ ಶ್ರೀವಾಣಿ ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಾವು ಹಾಗೂ ಪತಿ ವೇಣುಸ್ವಾಮಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರಂತೆ.
ತೆಲಂಗಾಣದ ಜನಪ್ರಿಯ ವಾಹಿನಿಯಲ್ಲಿ ಕೆಲಸ ಮಾಡುವ ಹಿರಿಯ ಪತ್ರಕರ್ತರೊಬ್ಬರು 5 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ವೇಣುಸ್ವಾಮಿ ಹಾಗೂ ವೀಣಾ ಶ್ರೀವಾಣಿ ಆರೋಪಿಸಿದ್ದಾರೆ. ಆ ಪತ್ರಕರ್ತ ನಮಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ ಅಂತಲೂ ಆರೋಪಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಆ ಹಿರಿಯ ಪತ್ರಕರ್ತ ಹಾಗೂ ವೇಣುಸ್ವಾಮಿ ನಡುವೆ ಜಗಳ ನಡೆಯುತ್ತಿತ್ತಂತೆ. ಜಾತಕದ ಹೆಸರಲ್ಲಿ ವೇಣುಸ್ವಾಮಿ ಮೋಸ ಮಾಡುತ್ತಿದ್ದಾರೆ ಎಂದು ಪತ್ರಕರ್ತ ಖಾಸಗಿ ವಾಹಿನಿಯಲ್ಲಿ ಡಿಬೇಟ್ವೊಂದರಲ್ಲಿ ಆರೋಪಿಸಿದ್ದರಂತೆ.