newsics.com
ಮಂಗಳೂರು: ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನರನ್ನು ಮನೆಯಿಂದ ಆಚೆ ಬರದಂತೆ ಎಡಬಿಡದಂತೆ ನಿರಂತರ ಮಳೆಯಾಗುತ್ತಿದೆ.
ಇದರಿಂದ ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಂಚಿನಡ್ಕ ಗ್ರಾಮದ ಜನರು ಕಿರು ದಾರಿಯಲ್ಲಿ ಕಷ್ಟಪಟ್ಟು ಶವ ಸಾಗಿಸಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ವೃದ್ಧೆಯೊಬ್ಬರ ಶವವನ್ನು ಕಿಂಡಿ ಅಣೆಕಟ್ಟಿನ ಕಾಲುದಾರಿಯಲ್ಲಿ ಪ್ರಯಾಸಪಟ್ಟು ಹೊತ್ತುಕೊಂಡು ಹೋಗಿದ್ದಾರೆ. ಬೆಂಚಿನಡ್ಕ–ಕಾಜಲ ಪ್ರದೇಶಗಳ ನಡುವೆ ಹರಿಯುವ ಹೊಳೆ ಇದಾಗೀದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಹೊಳೆಗೆ ಬೀಳುತ್ತಾರೆ.
ಅಷ್ಟು ಕಿರಿದಾದ ದಾರಿಯಲ್ಲಿ ಹೆಣ ಹೊತ್ತು ಸಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ, ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಪಿಎಂ ಆವಾಸ್ ಯೋಜನೆ ಮೊದಲ ಕಂತಿನ ಹಣ ಪಡೆದ 11 ವಿವಾಹಿತ ಮಹಿಳೆಯರು ಪ್ರೇಮಿಗಳೊಂದಿಗೆ ಪರಾರಿ!
ಷೇರು ಮಾರುಕಟ್ಟೆ ದಾಖಲೆ ಏರಿಕೆ: ಜೂನ್ ತಿಂಗಳೊಂದರಲ್ಲೇ 42 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆ ಓಪನ್!
ಕಮದಾಳು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಎದುರೇ ಚಿರತೆ ಹತ್ಯೆ: ತನಿಖೆಗೆ ರಾಜ್ಯ ಸರ್ಕಾರ ಆದೇಶ
ಮಾನಸಿಕ ಖಿನ್ನತೆಯಿಂದ ನಿದ್ದೆ ಇಲ್ಲದೇ ಒದ್ದಾಟ: ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ