newsics.com
ಮಂಗಳೂರು: ಮಂಗಳೂರಿಲ್ಲಿ ನಿರ್ಮಾಣ ಹಂತದ ಕಾಮಗಾರಿ ವೇಳೆ ಮಣ್ಣು ಕುಸಿದು ವಲಸೆ ಕಾರ್ಮಿಕರಿಬ್ಬರೂ ಮಣ್ಣಿನಡಿ ಸಿಲುಕಿದ್ದರು. ಈ ಇಬ್ಬರೂ ಬಿಹಾರ ಮೂಲದವರಾಗಿದ್ದು, ಚಂದನ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ.
ಇದರಲ್ಲಿ ರಾಜಕುಮಾರ್ ಅವರನ್ನು ತಕ್ಷಣಾ ರಕ್ಷಣಾ ತಂಡ ಮೇಲಕ್ಕೆ ಎತ್ತಿತ್ತು. ಆದ್ರೆ ಚಂದನ್ ಅವರನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ಸತತ 7 ಗಂಟೆಗಳ ಬಳಿಕೆ ಚಂದನ್ನನ್ನು ರಕ್ಷಣಾ ತಂಡ ಹೊರಗೆ ತೆಗೆಯಲಾಗಿತ್ತು. ಆದ್ರೆ ಇದೀಗ ಚಂದನ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸತತ ಏಳು ಗಂಟೆಗಳ ಕಾರ್ಯಚರಣೆಯ ನಂತರ ಇದೀಗ ಮಣ್ಣಿನಡಿಯಲ್ಲಿ ಸಿಲುಕಿದ್ದ ಚಂದನ್ನನ್ನು ಹೊರತೆಗೆಯಲಾಗಿತ್ತು, ದುರದೃಷ್ಟವಶಾತ್ ಕಾರ್ಯಾಚರಣೆ ಫಲಿಸದೆ ಮಣ್ಣಿನಡಿ ಸಿಲುಕಿದ ಕಾರ್ಮಿಕ ಚಂದನ್ (30 ವರ್ಷ) ಸಾವನ್ನಪ್ಪಿದ್ದಾರೆ.
ಕಂಗನಾ ಕಪಾಳಕ್ಕೆ ಹೊಡೆದಿದ್ದ CISF ಕಾನ್ಸ್ಟೆಬಲ್ ಕೌರ್ ಬೆಂಗಳೂರು ಏರ್ಪೋರ್ಟ್ಗೆ ಟ್ರಾನ್ಸ್ಫರ್