newsics.com
ಬೆಂಗಳೂರು: ಬೆಂಗಳೂರಿನಲ್ಲಿ ಸದಾ ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುತ್ತಿರುವ ವಾಹನ ಸವಾರರಿಗೆ ಆದರೆ, ಇದೀಗ ಹೊಸದೊಂದು ಸಮಸ್ಯೆ ಸೇರಿಕೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಸಮಸ್ಯೆ ಇದ್ದಿದ್ದೇ. ಇದರ ನಡುವೆ ಇದೀಗ ಬೀದಿ ದನಗಳಿಂದಾಗಿ ವಾಹನ ಸವಾರರು ರೋಸಿ ಹೋಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಅತ್ತ ಟ್ರಾಫಿಕ್ ಪೊಲೀಸರು ಕೂಡ ಬೀದಿ ದನಗಳ ನಿಯಂತ್ರಣಕ್ಕೆ ಪಾಲಿಕೆಗೆ ಪತ್ರ ಬರೆದಿದ್ದಾರೆ.
ಈ ಬೀದಿ ಬದಿಯ ದನಗಳು ರಾಜಾರೋಷವಾಗಿ ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ಹೇಗೆ ಬೇಕೊ ಹಾಗೇ ಓಡಾಡುವುದರಿಂದ, ಮಲಗುವುದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನ ಸವಾರರು ರಸ್ತೆಯಲ್ಲಿ ಓಡಾಡಲು ಕೂಡ ಭಯಪಡುವಂತಾಗಿದೆ. ಈ ದನಗಳ ಮಾಲೀಕರು ಅವುಗಳನ್ನ ಲಂಗು ಲಗಾಮು ಇಲ್ಲದ ಹಾಗೇ ಬಿಟ್ಟು ಬಿಡುತ್ತಾರೆ. ಇದರಿಂದ ದನಗಳು ಆಹಾರ ಅರಸಿ ಮಾರುಕಟ್ಟೆ ಪ್ರದೇಶ, ಸಾರ್ವಜನಿಕರು ಕಸ ಎಸೆಯುವಂತಹ ಪ್ರದೇಶಗಳಲ್ಲಿ ಓಡಾಡುತ್ತವೆ.
ರಸ್ತೆಯಲ್ಲಿ ಓಡಾಡುವ ದನಗಳು ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುವುದಲ್ಲದೇ ಇನ್ನಿತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ವಾಹನ ಸವಾರ ಮಹೇಶ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃಷಭ- ದೂರ ಪ್ರಯಾಣದಲ್ಲಿ ಜಾಗ್ರತೆ, ಕುಂಭ- ವ್ಯಾಪಾರ ವ್ಯವಹಾರ ಉತ್ತಮ, ನಿಮ್ಮ ಇಂದಿನ ರಾಶಿ ಭವಿಷ್ಯದಲ್ಲೇನಿದೆ?