newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
4 ಜುಲೈ 2024, ಗುರುವಾರ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 04/07/2024
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ಚತುರ್ದಶಿ 28:57:18*
ಪಕ್ಷ – ಕೃಷ್ಣ
ನಕ್ಷತ್ರ – ಮೃಗಶಿರ 27:53:33*
ಯೋಗ – ಗಂಡ 06:58:16
ಯೋಗ – ವೃದ್ಧಿ 29:12:37*
ಕರಣ – ವಿಷ್ಟಿ (ಭದ್ರ) 17:22:35
ಕರಣ – ಶಕುನಿ 28:57:18*
ತಿಂಗಳು (ಅಮಾವಾಸ್ಯಾಂತ್ಯ) ಜ್ಯೇಷ್ಠ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ- ವೃಷಭ till 15:57:13
ಚಂದ್ರ ರಾಶಿ- ಮಿಥುನ from 15:57:13
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ
ಸೂರ್ಯೋದಯ 05:59:18
ಸೂರ್ಯಾಸ್ತ 18:48:58
ಹಗಲಿನ ಅವಧಿ 12:49:39
ರಾತ್ರಿಯ ಅವಧಿ 11:10:36
ಚಂದ್ರಾಸ್ತ 17:33:49
ಚಂದ್ರೋದಯ 29:04:03*
ರಾಹು ಕಾಲ 14:00 – 15:37 ಅಶುಭ
ಯಮಘಂಡ ಕಾಲ 05:59 – 07:36 ಅಶುಭ
ಗುಳಿಕ ಕಾಲ 09:12 – 10:48
ಅಭಿಜಿತ್ 11:58 – 12:50 ಶುಭ
ದುರ್ಮುಹೂರ್ತ 10:16 – 11:07 ಅಶುಭ
ದುರ್ಮುಹೂರ್ತ 15:24 – 16:15 ಅಶುಭ
—
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

—
ಈ ದಿನದ ಮಾತು
ಯಸ್ಯ ಮಿತ್ರೇಣ ಸಂಭಾಷಾ
ಯಸ್ಯ ಮಿತ್ರೇಣ ಸಂಸ್ಥಿತಿಃ|
ಯಸ್ಯ ಮಿತ್ರೇಣ ಸಂಲಾಪಃ
ತತೋ ನಾಸ್ತೀಹ ಪುಣ್ಯವಾನ್॥
ಯಾರು ತನ್ನ ಗೆಳೆಯರ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತಾನೋ; ಯಾರು ಗೆಳೆಯರ ಜೊತೆಯಲ್ಲಿಯೇ ಇರುತ್ತಾನೋ; ಯಾರು ತನ್ನ ಗೆಳೆಯರೊಂದಿಗೆ ಪರಸ್ಪರ ಪ್ರೀತಿಪೂರ್ವಕ ಮಾತುಗಳನ್ನು ಆಡುತ್ತಾನೋ; ಆತನಿಗಿಂತ ಪುಣ್ಯವಂತನು ಬೇರೆ ಇಲ್ಲ.
—
ಇಂದಿನ ಇತಿಹಾಸ
ಜುಲೈ 4
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ: ಯುನೈಟೆಡ್ ಸ್ಟೇಟ್ಸ್ ಜುಲೈ 04, 1776 ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಗಳಿಸಿತು.
***
ಗುಲ್ಜಾರಿ ಲಾಲ್ ನಂದಾ: ಜುಲೈ 04, 1898 ರಂದು ಜನಿಸಿದರು. ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಜವಾಹರಲಾಲ್ ನೆಹರುರವರು 1964ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಗುಲ್ಜಾರಿ ಲಾಲ್ ನಂದಾ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ಲಾಲ್ ಬಹಾದೂರ್ ಶಾಸ್ತ್ರಿ 1966ರಲ್ಲಿ ನಿಧನರಾದಾಗ ಹಂಗಾಮಿ ಪ್ರಧಾನಿಗಳಾಗಿದ್ದರು. ಗುಲ್ಜಾರಿ ಲಾಲ್ ನಂದಾ ಭಾರತ ರತ್ನ ಪ್ರಶಸ್ತಿ ವಿಜೇತರು. ಗುಲ್ಜಾರಿಲಾಲ್ ನಂದಾ ಇವರು ಮಹಾತ್ಮ ಗಾಂಧೀಜಿಯವರ ತತ್ವಗಳ ಅನುಯಾಯಿಗಳಾಗಿದ್ದರು. 1998ರ ಜನವರಿಯಲ್ಲಿ ಗುಲ್ಜಾರಿಲಾಲ್ ನಂದಾ ನಿಧನರಾದರು.
***
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ): ಜುಲೈ 04, 1902 ರಂದು ನಿಧನರಾದರು. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು ರಾಷ್ಟ್ರೀಯ ‘ಯುವದಿನ’ವೆಂದು ಆಚರಿಸಲಾಗುತ್ತದೆ.
***
ಖ್ಯಾತ ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮ: ಕೃಷ್ಣಶರ್ಮರು ಹುಟ್ಟಿದ್ದು 1904 ರ ಜುಲೈ 04 ರಂದು ಚಿತ್ರದುರ್ಗ ತಾಲ್ಲೂಕಿನ ಸಿದ್ಧವನ ಹಳ್ಳಿಯಲ್ಲಿ. ಗಾಂಧಿ ವಿಚಾರವಾದಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ವಾಗ್ಮಿಗಳಾಗಿ, ಲೇಖಕರಾಗಿ, ಸಹಕಾರಿ ಕ್ಷೇತ್ರದ ಹರಿಕಾರರಾಗಿ ಮತ್ತು ಶ್ರೇಷ್ಠ ಪತ್ರಕರ್ತರಾಗಿ ಕನ್ನಡ ನಾಡಿನಲ್ಲಿ ಮಹಾನ್ ಸೇವೆ ಸಲ್ಲಿಸಿದವರಾಗಿದ್ದಾರೆ.
***
ಮೇರಿ ಕ್ಯೂರಿ: ಜುಲೈ 04, 1934 ರಂದು ನಿಧನರಾದರು. ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. 1867ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಸಾಮಾನ್ಯ ರೂಪದಲ್ಲಿ ಸಿಗುವಂತ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಇವರು ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದರು. 1903ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಲು ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನ ಹಂಚಿಕೊಂಡರು. 1911ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರದು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
***
ನಾಳೆಯ ಪಂಚಾಂಗ

ವೃಷಭ- ದೂರ ಪ್ರಯಾಣದಲ್ಲಿ ಜಾಗ್ರತೆ, ಕುಂಭ- ವ್ಯಾಪಾರ ವ್ಯವಹಾರ ಉತ್ತಮ, ನಿಮ್ಮ ಇಂದಿನ ರಾಶಿ ಭವಿಷ್ಯದಲ್ಲೇನಿದೆ?