newsics.com
ಬೆಂಗಳೂರು: ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದ ಕಾರಣ ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವವರಿಗೂ ಭಯ ಶುರುವಾಗಿದೆ. ಡೆಂಗ್ಯೂ ಹರಡುವಿಕೆ ನಿಯಂತ್ರಣಕ್ಕೆ ನಮ್ಮ ಮೆಟ್ರೋ ಅಖಾಡಕ್ಕಿಳಿದಿದೆ.
ಸ್ವಚ್ಛತೆ ಇಲ್ಲದ ಕಡೆ, ನೀರು ನಿಂತ ಕಡೆ ಸೊಳ್ಳೆ ಕಚ್ಚಿಸಿಕೊಂಡು ತಮಗೂ ಸೋಂಕು ಹರಡುತ್ತದೆಯೋ ಎಂಬ ಆತಂಕ ಜನರಲ್ಲಿದೆ. ಇದನ್ನು ನಿವಾರಿಸಲು ನಮ್ಮ ಮೆಟ್ರೋ ಕೂಡ ಈಗ ಕ್ರಮಕ್ಕೆ ಮುಂದಾಗಿದೆ. ಮೆಟ್ರೋ ಸಿಬ್ಬಂದಿ ಕೂಡ ಈಗ ಔಷಧಿ ಸಂಪಡಣೆ ಸೇರಿ ಮುನ್ನೆಚ್ಚರಿಕಾ ಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ದಿನಕ್ಕೆ ಎರಡು ಬಾರಿ ಔಷಧ ಸಿಂಪಡಣೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಮೆಟ್ರೋ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಕೂಡ ನಮ್ಮ ಮೆಟ್ರೋ ಸಿಬ್ಬಂದಿಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಇದರ ಜತೆಗೆ, ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನೂ ಬಿಎಂಆರ್ಸಿಎಲ್ ಕಡ್ಡಾಯಗೊಳೊಸಿದೆ. ಮೆಟ್ರೋ ಆವರಣದಲ್ಲಿ, ಕಚೇರಿ ಸುತ್ತಮುತ್ತ ನಿಂತ ನೀರು, ಮಳೆ ನೀರು, ಹಸಿ ಕಸ, ಸೊಳ್ಳೆಗಳ ಮೊಟ್ಟೆ ಶೇಖರಣೆ ಆಗುವಂಥ ಪ್ರದೇಶಗಳಿದ್ದರೆ ಅವುಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ.