newsics.com
ನವದೆಹಲಿ: ರಾಮಮಂದಿರ ಉದ್ಘಾಟನೆ ಬಳಿಕ ನಿತ್ಯವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಅಯೋಧ್ಯೆಯಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ವಸ್ತು ಸಂಗ್ರಹಾಲಯ ಆರಂಭಿಸಲು ಟಾಟಾ ಸನ್ಸ್ ಮುಂದಾಗಿದೆ.
ಈ ಮ್ಯೂಸಿಯಂ’ ನಿರ್ಮಿಸುವ ಬಗ್ಗೆ ಟಾಟಾ ಸನ್ಸ್ ಪ್ರಸ್ತಾವನೆಗೆ ಉತ್ತರ ಪ್ರದೇಶ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಇದಕ್ಕಾಗಿ ಅಗತ್ಯವಾದ ಜಾಗವನ್ನು 1 ರೂ. ಶುಲ್ಕಕ್ಕೆ 90 ವರ್ಷ ಕಾಲ ಟಾಟಾ ಸನ್ಸ್ಗೆ ಗುತ್ತಿಗೆ ನೀಡಲು ನಿರ್ಧರಿಸಿದೆ.
ಭಾರತದಲ್ಲಿರುವ ಪ್ರಮುಖ ದೇಗುಲಗಳ ಬಗ್ಗೆ ಮಾಹಿತಿ ನೀಡಲು ಮತ್ತು ಸನಾತನ ಧರ್ಮದ ಬಗ್ಗೆ ಪ್ರಚಾರಕ್ಕಾಗಿ ಈ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ.
ದೇಗುಲಗಳ ವಸ್ತು ಸಂಗ್ರಹಾಲಯವು ಪ್ರಮುಖವಾಗಿ 12 ಗ್ಯಾಲರಿಗಳನ್ನು ಒಳಗೊಂಡಂತೆ ವಿನ್ಯಾಸ ಮಾಡಲಾಗುವುದು. 12 ಗ್ಯಾಲರಿಗಳ ಹೊರತಾಗಿ, ವಸ್ತುಸಂಗ್ರಹಾಲಯವು ಸುಂದರವಾದ ಉದ್ಯಾನವನ, ಕೆಫೆಟೇರಿಯಾ, ಕೊಳ ಮತ್ತು ನೆಲಮಾಳಿಗೆಯ ಪಾರ್ಕಿಂಗನ್ನೂ ಒಳಗೊಂಡಿದೆ.