newsics.com
ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಖಿ ಹಬ್ಬದ ದಿನದಂದು ಸಹೋದರಿಯರು ಬಹಳ ಉತ್ಸಾಹದಿಂದ ರಾಖಿ ಕಟ್ಟುತ್ತಾರೆ. ಆದರೆ ಒಂದು ಅಥವಾ ಎರಡು ದಿನಗಳ ನಂತರ, ರಾಖಿ ತೆಗೆದು ಎಲ್ಲೋ ಎಸೆದುಬಿಡುವ ಸಂಪ್ರದಾಯ ಇತ್ತೀಚೆಗೆ ಬೆಳೆದುಬಂದಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಅಥವಾ ಎರಡು ದಿನಗಳ ನಂತರ ರಾಖಿ ಕಟ್ಟುವುದು ತಪ್ಪು. ಹಾಗಾಗಿ ಈ ತಪ್ಪು ಮಾಡಬೇಡಿ. ಈ ರೀತಿ ಮಾಡುವುದು ಅಶುಭ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷದ ರಕ್ಷಾಬಂಧನವನ್ನು ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತದೆ. ಈ ಬಾರಿಯೂ ರಾಖಿ ಹಬ್ಬದ ದಿನ ಭದ್ರ ಛಾಯೆ ಇದೆ. ಆದ್ದರಿಂದ ಈ ವರ್ಷ ರಕ್ಷಾಬಂಧನವನ್ನು ಮಧ್ಯಾಹ್ನ 1:30 ರ ನಂತರ ಆಚರಿಸಲು ಜ್ಯೋತಿಷಿಗಳು ಸೂಚಿಸುತ್ತಾರೆ.
ರಕ್ಷಾಬಂಧನದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ರಾಖಿಯನ್ನು ತೆಗೆದು ಎಸೆಯಬಾರದು. ಕನಿಷ್ಠ 21 ದಿನಗಳ ಕಾಲ ರಾಖಿ ಕಟ್ಟಿರಬೇಕು. ಇಷ್ಟು ದಿನಗಳ ಕಾಲ ನಿಮ್ಮ ಕೈಯಲ್ಲಿ ರಾಖಿ ಇಡಲು ಸಾಧ್ಯವಾಗದಿದ್ದರೆ, ಕನಿಷ್ಟ ಶ್ರೀಕೃಷ್ಣ ಜನ್ಮಾಷ್ಟಮಿಯವರೆಗಾದರೂ ಸಹೋದರಿ ಕಟ್ಟಿರುವ ರಾಖಿ ನಿಮ್ಮ ಕೈಯಲ್ಲಿರಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಖಿಯನ್ನು ತೆಗೆದ ನಂತರ ಅದನ್ನು ಎಲ್ಲಿಯಾದರೂ ಎಸೆಯುವ ಬದಲು, ರಾಖಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಪವಿತ್ರ ಸ್ಥಳದಲ್ಲಿ ಅಥವಾ ನಿಮ್ಮ ಸಹೋದರಿಯ ವಸ್ತುಗಳೊಂದಿಗೆ ಇರಿಸಿ. ಮುಂದಿನ ರಾಖಿ ಹಬ್ಬದವರೆಗೂ ಜೋಪಾನ ಮಾಡಿಟ್ಟುಕೊಳ್ಳಿ. ಅಥವಾ ರಾಖಿಯನ್ನು ಹರಿಯುವ ನೀರಿನಲ್ಲಿ ಬಿಡಿ. ರಾಖಿ ಕಿತ್ತು ಬಂದರೆ ಅಥವಾ ಹರಿದರೆ, ಅದನ್ನು ಮರದ ಬೇರುಗಳ ಬಳಿ ಒಂದು ರೂಪಾಯಿ ನಾಣ್ಯದೊಂದಿಗೆ ಹೂತುಹಾಕಿ.